ಪುಟಗಳು

ಶನಿವಾರ, ಜನವರಿ 11, 2025

ಪ್ರಭು ಮಾಲೆ

ಎಲೆ ಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚಿಸುತ್ತಿರುವ ಲೇಖಕರೆಂದರೆ ಪ್ರಭು ಮಾಲೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ತುಳಜಾಪೂರ ಗ್ರಾಮದ ಗಣಪತಿ ಮಾಲೆ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೬ರಲ್ಲಿ ಪೋಲಿಸ್ ಪೇದೆ ಹುದ್ದೆಗೆ ಸೇರಿ ಸದ್ಯ ಬೀದರದ ಜನವಾಡ ಪೋಲಿಸ್ ಠಾಣೆಯ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೪ರಲ್ಲಿ `ಮಹಾತ್ಮ ಜ್ಯೋತಿಬಾ ಪುಲೆ' (ನಾಟಕ) ೨೦೧೬ರಲ್ಲಿ `ಮಕ್ಕಳಿಗಾಗಿ ಭೀಮವಾಣಿ' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ. ಮತ್ತು ಮೈಸೂರು ಪೋಲಿಸ್ ಎದೆಯಂತರಾಳದಿAದ ರಾಜ್ಯ ಮಟ್ಟದ ಕವಿಗೊಷ್ಠಿ, ೨೦೧೭ರಲ್ಲಿ ನಡೆದ ಬೀದರನಲ್ಲಿ ನಡೆದ `ಜನಪರ ಉತ್ಸವ’ ಕವಿಗೊಷ್ಠಿ, ಬೀದರ ಜಿಲ್ಲಾ ಬಹುಭಾಷಾ ಕವಿಗೊಷ್ಠಿ , ಕಲಬುರಗಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಬೀದರ ಜನಪರ ಉತ್ಸವ ಕಾರ್ಯಕ್ರಮದಲ್ಲಿ ೩ ಸಾವಿರ ಗೌರವಧನವು ಪಡೆದಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ನಾಟಕ ರತ್ನ' ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ಬಸವಕಲ್ಯಾಣ ಬೇಲೂರಿನ ಉರಿಲಿಂಗ ಪೆದ್ದಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾಸಿದ್ದಾರೆ. ಇವರು ತಮ್ಮ ತಾಯಿ ಹಾಡುತ್ತಿದ್ದ ಜಾನಪದ ಗೀತೆಗಳಿಗೆ ಮಾರುಹೋಗಿ ಕೆಲ ಜಾನಪದ ಕೃತಿಗಳು ಸಂಪಾದಿಸುವುದರೊAದಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ