ಶನಿವಾರ, ಜನವರಿ 11, 2025
ಪ್ರಭು ಮಾಲೆ
ಎಲೆ ಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚಿಸುತ್ತಿರುವ ಲೇಖಕರೆಂದರೆ ಪ್ರಭು ಮಾಲೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ತುಳಜಾಪೂರ ಗ್ರಾಮದ ಗಣಪತಿ ಮಾಲೆ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೬ರಲ್ಲಿ ಪೋಲಿಸ್ ಪೇದೆ ಹುದ್ದೆಗೆ ಸೇರಿ ಸದ್ಯ ಬೀದರದ ಜನವಾಡ ಪೋಲಿಸ್ ಠಾಣೆಯ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೪ರಲ್ಲಿ `ಮಹಾತ್ಮ ಜ್ಯೋತಿಬಾ ಪುಲೆ' (ನಾಟಕ) ೨೦೧೬ರಲ್ಲಿ `ಮಕ್ಕಳಿಗಾಗಿ ಭೀಮವಾಣಿ' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ. ಮತ್ತು ಮೈಸೂರು ಪೋಲಿಸ್ ಎದೆಯಂತರಾಳದಿAದ ರಾಜ್ಯ ಮಟ್ಟದ ಕವಿಗೊಷ್ಠಿ, ೨೦೧೭ರಲ್ಲಿ ನಡೆದ ಬೀದರನಲ್ಲಿ ನಡೆದ `ಜನಪರ ಉತ್ಸವ’ ಕವಿಗೊಷ್ಠಿ, ಬೀದರ ಜಿಲ್ಲಾ ಬಹುಭಾಷಾ ಕವಿಗೊಷ್ಠಿ , ಕಲಬುರಗಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಬೀದರ ಜನಪರ ಉತ್ಸವ ಕಾರ್ಯಕ್ರಮದಲ್ಲಿ ೩ ಸಾವಿರ ಗೌರವಧನವು ಪಡೆದಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ನಾಟಕ ರತ್ನ' ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ಬಸವಕಲ್ಯಾಣ ಬೇಲೂರಿನ ಉರಿಲಿಂಗ ಪೆದ್ದಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾಸಿದ್ದಾರೆ. ಇವರು ತಮ್ಮ ತಾಯಿ ಹಾಡುತ್ತಿದ್ದ ಜಾನಪದ ಗೀತೆಗಳಿಗೆ ಮಾರುಹೋಗಿ ಕೆಲ ಜಾನಪದ ಕೃತಿಗಳು ಸಂಪಾದಿಸುವುದರೊAದಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ