ಪುಟಗಳು

ಶನಿವಾರ, ಜನವರಿ 11, 2025

ಪಂಚಶೀಲ ಮಾಂಜ್ರೇಕರ್

ಕವಯತ್ರಿ ಪಂಚಶೀಲ ಮಾಂಜ್ರೇಕರ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರು (ಬಿ) ಗ್ರಾಮದ ನರಸಿಂಗ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೧-೨-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರೆಯಾದ ಇವರು ಮದುವೆಯ ನಂತರ ಕೆಲಕಾಲ ಹೈದರಾಬಾದನಲ್ಲಿ ವಾಸವಾಗಿ, ೨೦೧೨ರಲ್ಲಿ ಆಕಸ್ಮಿಕ ನಿಧನ ಹೊಂದಿದ್ದಾರೆ. ಇವರ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಅನೇಕ ಕವನ, ಲೇಖನ, ಬರಹಗಳು ಬರೆದಿದ್ದಾರೆ. ಸ್ತ್ರೀ ಸಂವೇದನೆ, ಸಾಕ್ಷರತೆ, ನಾಡು-ನುಡಿ, ಪ್ರಕೃತಿ ವಿಕೋಪ, ಕಿಲ್ಲಾರಿ ಭೂಕಂದ ಸುನಾಮಿ ಮೊದಲಾದವುಗಳ ಕುರಿತು ಕವನ ರಚಿಸಿದ್ದಾರೆ. ಮತ್ತು `ಭಾವನೆಗಳ ಬಳ್ಳಿ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಹಾಗೂ ಹಲವಾರು ಕವನ ಲೇಖನ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ