ಪುಟಗಳು

ಶನಿವಾರ, ಜನವರಿ 11, 2025

ಶಾಂತಮ್ಮಾ ಬಲ್ಲೂರ್

ಕವಯತ್ರಿ ಶಾಂತಮ್ಮಾ ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಸಂಗ್ರಾಮ್ ಮತ್ತು ತುಳಸಮ್ಮ ದಂಪತಿಗಳಿಗೆ ದಿನಾಂಕ ೫-೪-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಸ್ನಾತಕೋತ್ತರ ಪದವಿ ಹಾಗೂ `ಕನ್ನಡ ರತ್ನ’ ತತ್ಸಮಾನ ಪದವಿ ಪಡೆದ ಇವರು ಬೀದರದ ಸುದರ್ಶನಿ ಬಲ್ಲೂರ್ ಶಿಕ್ಷಣ ಸಂಸ್ಥೆಯ ಆರ್.ಆರ್.ಬಲ್ಲೂರ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೮ರಲ್ಲಿ `ನೆರಳು’ (ಕವನಸಂಕಲನ) ೨೦೧೫ರಲ್ಲಿ `ವಚನ ಗೊಂಚಲು’ (ಆಧುನಿಕ ವಚನ ಸಂಕಲನ) ಪ್ರಕಟಿಸಿ ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ತಮ್ಮ ತಾಯಿ ಹಾಡಿದ ೩೦೦ಕಿಂತಲೂ ಹೆಚ್ಚು ಜಾನಪದ ಹಾಡುಗಳು ಸಂಗ್ರಹಿಸಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಮತ್ತು ಹಲವಾರು ಕವನ, ಲೇಖನಗಳು ಬರೆದಿದ್ದು ಅವು ಕೆಲ ಪ್ರಮುಖ ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಬೀದರ ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘ ಮತ್ತು ಜಾನಪದ ಸಂಘದ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಸಂತೋಷ ಶಿಕ್ಷಣ ಸಂಸ್ಥೆಯ ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಚರ್ಚಿನ ಮಹಿಳಾ ವಿಭಾಗದ ಏರಿಯಾ ಕಾರ್ಯದರ್ಶಿಯಾಗಿ ಕ್ರೈಸ್ತ ಧಾರ್ಮಿಕ ಚಟುವಟಿಕೆಯೊಂದಿಗೆ ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ