ಶನಿವಾರ, ಜನವರಿ 11, 2025
ಮಲ್ಲೇಶ್ವರಿ ಉದಯಗಿರಿ
ಭಾವ ತುಂಬಿ ಕಾವ್ಯ ರಚಿಸುವ ಕವಯತ್ರಿ ಮಲ್ಲೇಶ್ವರಿ ಉದಯಗಿರಿ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಧೋಳ (ಬಿ) ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರೆಯಾಗಿದ್ದು ಸದ್ಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಭಾವ ಕಾರಂಜಿ', `ಭಾವ ಸ್ಪರ್ಶ', `ಭಾವಂಕರ್ಷ' ಇವು ಅವರ ಪ್ರಕಟಿತ ಕವನ ಸಂಕಲನಗಳಾಗಿವೆ. ಮತ್ತು `ಭಾವದುನ್ಮಿಲನ', `ಗಜಲ್ಗಳು', `ಆಧುನಿಕ ವಚನಗಳು', `ಹನಿಗವನಗಳು', `ಹಿಂದಿ ಕವಿತೆಗಳು', `ಮಕ್ಕಳ ಹಾಡು' ಇವು ಇವರ ಅಪ್ರಕಟಿತ ಕೃತಿಗಳಾಗಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ, ಪ್ರಕಟವಾಗಿವೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ರತ್ನ ಪ್ರಶಸ್ತಿ, ಹಾಗೂ ಹುಲಸೂರು ತಾಲೂಕಿನ ಬೇಲೂರಿನ `ಉರಿಲಿಂಗ ಪೆದ್ದಿ ಪ್ರಶಸ್ತಿ' ಗಳು ಲಭಿಸಿವೆ. ಇವರು ಬೀದರ ಜಿಲ್ಲಾ ಧರಿನಾಡು ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ