ಭಾನುವಾರ, ಜನವರಿ 12, 2025
ದಿಲೀಪ ವಿ.ತರನಳ್ಳಿ
ಉದಯೋನ್ಮುಖ ಬರಹಗಾರ ದಿಲೀಪ ವಿ.ತರನಳ್ಳಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ವಿಜಯಕುಮಾರ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಇಡಿ. ಪದವೀಧರರಾದ ಇವರು ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೨೦ರಲ್ಲಿ `ಹಸಿದ ಹೊಟ್ಟೆ' ಎಂಬ ಕವನಸಂಕಲನ ಪ್ರಕಟಿಸಿದ್ದು, ಅದು ೨೦೧೯ನೇ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಧನಕ್ಕೆ ಆಯ್ಕೆಯಾಗಿ ಪ್ರಕಟವಾಗಿದೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ