ಭಾನುವಾರ, ಜನವರಿ 12, 2025
ಜ್ಯೋತಿ ಮಠಪತಿ.
ಉದಯೋನ್ಮುಖ ಕವಯತ್ರಿಯಾದ ಜ್ಯೋತಿ ಮಠಪತಿ ಯವರು ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ನೀಲಕಂಠಯ್ಯಾ ಸ್ವಾಮಿ ಮತ್ತು ಕಲಾವತಿ ಸ್ವಾಮಿ ದಂಪತಿಗಳಿಗೆ ದಿನಾಂಕ ೧-೧-೧೯೮೭ರಲ್ಲಿ ಜನಿಸಿದ್ದಾರೆ. ಬಿ.ಇ.ಪದವಿಧರರಾದ ಇವರು ಸಂತೋಷ ಮುತ್ತಂಗಿಯವರ ಧರ್ಮಪತ್ನಿಯಾಗಿದ್ದು, ಗೃಹಿಣಿಯಾಗಿದ್ದುಕೊಂಡೆ ಕವನ, ಲೇಖನ, ಆಧುನಿಕ ವಚನಗಳನ್ನು ಬರೆದಿದ್ದಾರೆ. ೨೦೧೮ರಲ್ಲಿ `ಭಕ್ತಳ ಭಕ್ತಿಗೆ ಪ್ರತ್ಯಕ್ಷನಾದ ರಾಚೋಟೇಶ್ವರ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಮತ್ತು `ರಾಚೋಟೆಶ್ವರ’ ಎಂಬ ಅಂಕಿತನಾಮದಲ್ಲಿ ನೂರಾರು ಆಧುನಿಕ ವಚನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ