ಪುಟಗಳು

ಭಾನುವಾರ, ಜನವರಿ 12, 2025

ರೇಣುಕಾ ಎನ್.ಬಿ.

ಕವಯತ್ರಿ, ರೇಣುಕಾ ಎನ್.ಬಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿ ತುಗಾಂವ ಗ್ರಾಮದ ನೆಹರು ಭಂಡೆ ಮತ್ತು ಪದ್ಮಾವತಿ ಭಂಡೆ ದಂಪತಿಗಳಿಗೆ ದಿನಾಂಕ ೨೦-೧೧-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ತಾಲೂಕಿನ ಕಂದಗೂಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೦ರಲ್ಲಿ `ಭಾವ ಕಾರಂಜಿ’ ೨೦೧೩ರಲ್ಲಿ `ಗರಿ ಬಿಚ್ಚಿದ ನವಿಲು’ ೨೦೧೫ರಲ್ಲಿ `ವಚನಾಂಜಲಿ.' ಎಂಬ ಕವನ ಸಂಕಲನಗಳು, ಮತ್ತು ೨೦೧೮ರಲ್ಲಿ ಹಿಂದಿ ಕಾದಂಬರಿಕಾರ ಕುಶಲೋಶ ಶಾಖ್ಯ ರವರ `ಸ್ತ್ರೀ ಶಕ್ತಿ ಯಶೋಧರ' ಎಂಬ ಕಾದಂಬರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೯ರಲ್ಲಿ `ಭೂಮಿಗೆ ಬಂದ ಭಗವಂತ' ಎಂಬ ಜೀವನ ಚರಿತ್ರೆ ಶಿವರಾಮ ಮಹಾರಾಜರ ಕುರಿತು ಪ್ರಕಟಿಸಿದ್ದಾರೆ. ಇವರ `ಭಾವ ಕಾರಂಜಿ' ಕವನ ಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಧನ ಪಡೆದುಕೊಂಡಿರುತ್ತದೆ. ಇವರ ಕಲೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೀದರ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಮೊದಲಾದ ಕಡೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಬೀದರ ಕದಂಬ ಕನ್ನಡ ಸಾಹಿತ್ಯ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಗಾನ ಕಲಾವಿದೆಯಾಗಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ `ಗಾನಸುಧೆ’ ಕಾರ್ಯಕ್ರಮವು ನೀಡಿ ಜನಮನ ರಂಜಿಸಿದ್ದಾರೆ. ಇವರ ಕತೆ, ಕವನ,ಲೇಖನ,ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ