ಭಾನುವಾರ, ಜನವರಿ 12, 2025
ಮಹಾರುದ್ರ ಡಾಕುಳಗೆ
ಸಾಹಿತಿ ಮಹಾರುದ್ರ ಡಾಕುಳಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೬-೧೦-೧೯೮೪ ರಲ್ಲಿ ಜ£ಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಬೀದರನಲ್ಲಿ ಕಂಪ್ಯೂಟರ್ ಡಿಸೈನರ್ ಮತ್ತು ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶರಣ ಸಾಹಿತ್ಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಇವರು ‘ಎಲ್ಲಿಗೆ ಪಯಣ’ (ಕವನಸಂಕಲನ) ‘ಪ್ರಥಮಂತು ಬಸವಣ್ಣ’ ಮತ್ತು ‘ಬಸವ ಮಹಾಮನೆ ದರ್ಶನ’ ಎಂಬ ಶರಣ ಸಾಹಿತ್ಯ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರೀಯ ಜೂ£ಯರ್ ಫೆಲೋಶಿಪ್. ಮತ್ತು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ವತಿಯಿಂದ ‘ರಾಷ್ಟ್ರೀಯ ಲೋಕಕಲಾ ಪ್ರಶಸ್ತಿ. ಹುಲಸೂರು ಮಠದಿಂದ ಸೇವಾ ವಿದುರ ಪ್ರಶಸ್ತಿ, ಹಾಗೂ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ‘ಶರಣಧರ್ಮ ರತ್ನ ಪ್ರಶಸ್ತಿ. ಸೇರಿದಂತೆ ಮೊದಲಾದವು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ