ಭಾನುವಾರ, ಜನವರಿ 12, 2025
ಮಹೇಶ ಬನ್ನಾಳೆ
ಉದಯೋನ್ಮುಖ ಬರಹಗಾರ ಮಹೇಶ ಬನ್ನಾಳೆಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ `ಕೋನಮೇಳಕುಂದಾ' ಗ್ರಾಮದ ಸಂಗಶೆಟ್ಟಿ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಭಾಲ್ಕಿ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕತೆ, ಕವನ, ಲೇಖನ ಮೊದಲಾದ ಬರಹಗಳನ್ನು ಬರೆಯುವ ಗೀಳು ಬೆಳೆಸಿಕೊಂಡ ಇವರು `ಜ್ಣಾನ ಜ್ಯೋತಿ ಡಾ.ಚನ್ನಬಸವಲಿಂಗ ಪಟ್ಟದ್ದೆವರು' (ಕವನ ಸಂಕಲನ) 'ಭಾಲ್ಕಿಯ ಬೆಳಗು ಬಸವಲಿಂಗ ಪಟ್ಟದ್ದೆವರು' (ಚರಿತ್ರೆ). `ಗುರುಕುಲ ಕಿರಣ' (ಲೇಖನ) ಎಂಬ ಕೃತಿಗಳು ಬರೆದಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ