ಪುಟಗಳು

ಭಾನುವಾರ, ಜನವರಿ 12, 2025

ಡಾ. ನೀಲಾಂಬಿಕಾ ಶೇರಿಕಾರ

ಸಾಹಿತಿ ಡಾ.ನೀಲಾಂಬಿಕಾ ಶೇರಿಕಾರ ರವರು ಬೀದರ ಜಿಲ್ಲೆ ಬಸವಕಲ್ಯಾಣದ ಶೇರಿಕಾರ ಎಂಬ ದೊಡ್ಡ ಮನೆತನದ ನಾಗಶೆಟ್ಟೆಪ್ಪಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಹಾಡಿದೇನು ಹಾಡು' `ಮಹಾ ಮನೆಯ ಮಹಿಮಾ' `ನನ್ನವ್ಬ' ಎಂಬ ಕವನ ಸಂಕಲನಗಳು, `ಬಹುರೂಪಿ ಚೌಡಯ್ಯ , `ಪೂಜ್ಯ ಚನ್ನಬಸವ ಪಟ್ಟದ್ದೆವರು'. 'ಕಲ್ಯಾಣ ಕಣ್ಮಣಿ ಬಾಬಾಸಾಹೇಬ ವಾರದ, ' `ಪೂಜ್ಯ ದೊಡ್ಡಪ್ಪ ಅಪ್ಪ' `ನಿರವತಾರೆ ಅಕ್ಕ ನಾಗಮ್ಮ' `ವೈದ್ಯ ನಕ್ಷತ್ರ'. 'ಅಷ್ಟಾವರಣೆ'. `ಅನುಭವ ಮಂಟಪ'. `ಮಹಾಮನೆ'. ಎಂಬ ಶರಣ ಸಾಹಿತ್ಯ ಕೃತಿಗಳು `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು' `ಶರಣಬಸವರ ಹಂತಿಯ ಹಾಡು'. `ಶರಣಬಸರ ಲಾವಣಿ ಪದಗಳು' `ಜನಪದ ಜ್ಯೋತಿ ಶರಣಬಸವ' `ಶರಣಬಸವರ ಶಿವಲೀಲೆಗಳು ' ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. `ಅವ್ವ ಕಾಡಾದಿ ಗೌರವ್ವ ಹಾಡಿದ ಹಾಡು' ಕೃತಿಗೆ ಮುಖ್ಯ ಮಂತ್ರಿಯಿAದ ಪ್ರಶಸ್ತಿಯು ಲಭಿಸಿದೆ. ಮತ್ತು ಇವರ `೭೭೦ ಅಮರ ಗಣಂಗಳು' `ಬಸವಕಲ್ಯಾಣ ಶರಣರ ನೆಲೆಗಳು' `ತಾಯಿಯ ಪದ' `ಹೇಮರೆಡ್ಡಿ ಮಲ್ಲಮ್ಮ' ಈ ಕೃತಿಗಳು ಮುದ್ರಣದ ಹಂತದಲ್ಲಿವೆ. `ದಾಸೋಹ ಬಂಡಾರಿ ಶರಣಬಸವ' ಎಂಬ ಜನಪದ ಮಹಾಕಾವ್ಯ ರಚಸಿದ ಇವರು ತ್ರಿಪದಿಯಲ್ಲಿ ಭಾಲ್ಕಿ ಶ್ರೀಗಳ ಕುರಿತು ಮತ್ತು ಜನಪದ ಜ್ಯೋತಿ ಶರಣಬಸವ ಕೃತಿಗಳನ್ನು ರಚಿಸಿದ್ದಾರೆ. ಹಂಪಿ, ಗುಲ್ಬರ್ಗ ವಿಶ್ವವಿದ್ಯಾಲಯಗಳ ಎಂ.ಫಿಲ್.ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಇವರ ಮನೆತನದ ಇನ್ನೊಂದು ಹೆಮ್ಮೆಯ ವಿಷಯವೆಂದರೆ ನಿಜಾಮ ಆಡಳಿತದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರ ಕುಟುಂಬವು ಬಡವರಿಗೆ ಅನ್ನ ಅರಿವೆ ಆಶ್ರಯ ನೀಡಿ ಹಿಂದು ಮುಸ್ಲಿಂ ಎನ್ನದೆ ಎಲ್ಲ ಸಮೂದಾಯದವರ ಜೀವ ರಕ್ಷಣೆ ಮಾಡಿರುವುದು ಈಗ ಐತಿಹ್ಯವಾಗಿದೆ. ಸದ್ಯ ಇವರು ಕಲಬುರಗಿಯಲ್ಲಿ ನೆಲೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ