ಭಾನುವಾರ, ಜನವರಿ 12, 2025
ಡಾ.ಕಲ್ಯಾಣಮ್ಮ ಲಂಗೋಟಿ
ಸಾಹಿತಿ ಡಾ.ಕಲ್ಯಾಣಮ್ಮ ಲಂಗೋಟಿ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬೀರಗಿ ಗ್ರಾಮದ ಹಾವಪ್ಪ ಕೋಟೆನವರ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ದಿನಾಂಕ ೫-೨-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಬಿಜಾಪುರದ ಶರಣ ಸಾಹಿತಿ ಪ್ರೊ. ಸಿದ್ಧಣ್ಣ ಲಂಗೋಟಿಯವರ ಧರ್ಮ ಪತ್ನಿಯಾಗಿದ್ದು, ೧೯೮೦ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆಂಬಳಗಿ ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ೧೯೭೯ರಲ್ಲಿ `ಮರಣವೇ ಮಹಾ ನವಮಿ’ (ಲೇಖನ) ೧೯೮೦ರಲ್ಲಿ `ಗಣನಾಯಕ ಮಡಿವಾಳ ಮಾಚಿದೇವರು’ ೧೯೮೨ರಲ್ಲಿ `ಷಣ್ಮುಖ ಶಿವಯೋಗಿಗಳು ಕಂಡ ಬಸವಣ್ಣನವರು’ ೧೯೮೫ರಲ್ಲಿ `ಶರಣೆಯರ ವಚನಾಮೃತ’ ೧೯೮೮ರಲ್ಲಿ `ಶರಣೆಯರ ವಚನಗಳು’ ೧೯೮೯ರಲ್ಲಿ `ಸಿದ್ಧಲಿಂಗೇಶ್ವರರು ಕಂಡ ಬಸವಣ್ಣನವರು’ `ದೇವದಾಸಿ ಪದ್ದತಿ ವಿಮೋಚನೆ ಹಾಗೂ ಬಸವಣ್ಣನವರು’ ಮತ್ತು `ಅಕ್ಕ ಮಹಾದೇವಿಯ ವಚನಗಳು’ ೧೯೯೦ರಲ್ಲಿ `ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳು’ ಮತ್ತು `ನೀಲಾಂಬಿಕೆಯ ವಚನಗಳು’ ೨೦೦೦ರಲ್ಲಿ `ಸ್ತ್ರೀ ಸಂವೇದನೆಗಳು' (ಕವನ ಸಂಕಲನ) ೨೦೦೧ರಲ್ಲಿ `ಜಯದೇವಿ ತಾಯಿ ಲಿಗಾಡೆ' ಮತ್ತು `ಕವಿಗಳು ಕಂಡ ಮಹಾಂತ ಶಿವಯೋಗಿಗಳು’ ೨೦೦೪ರಲ್ಲಿ `ಹಡಪದ ಲಿಂಗಮ್ಮ’ ೨೦೦೫ರಲ್ಲಿ `ಬಸವಾದಿ ಶರಣರ ವಚನಾಂಕಿತಗಳು’ ೨೦೦೬ರಲ್ಲಿ `ನೂತನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು’ ೨೦೦೮ರಲ್ಲಿ `ವರಕವಿ-ಜಗದಕವಿ ಈಶ್ವರ ಸಣ್ಣಕಲ್ಲರು’ ಇವು ಅವರ ಪ್ರಮುಖ ಶರಣ ಸಾಹಿತ್ಯದ ಕೃತಿಗಳಾಗಿವೆ. ಇವರಿಗೆ ೧೯೯೯ರಲ್ಲಿ ಇಳಕಲ್ ಶ್ರೀ ಮಠದಿಂದ ಬಸವ ಗುರು ಕಾರುಣ್ಯ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಆದರ್ಶ ಶರಣೆ ದಾಂಪತ್ಯ ಪ್ರಶಸ್ತಿ, ಮತ್ತು ಲಚ್ಚೆಯಬ್ಬರಸಿ' ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಶ್ರೀಶೈಲದಲ್ಲಿ ಜರುಗಿದ ಬಸವಭೂಮಿ ೫ನೇ ಶರಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಕುರಿತು ಭಾಲ್ಕಿ ಸಾಹಿತಿ ವೀರಶೆಟ್ಟಿ ಭಾವುಗೆಯವರು ಲೇಖನಗಳು ಬರೆದು ಪ್ರಕಟಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ