ಭಾನುವಾರ, ಜನವರಿ 12, 2025
ಜ್ಯೋತಿ ಡಿ.ಬೊಮ್ಮಾ
ಕವಯತ್ರಿ ಜ್ಯೋತಿ ಡಿ.ಬೊಮ್ಮಾ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ಡಾ.ಸುಭಾಷ ಮೀಸೆ ಮತ್ತು ವಿಜಯಲಕ್ಷ್ಮಿ ಮೀಸೆ ದಂಪತಿಗಳಿಗೆ ದಿನಾಂಕ ೧೪-೭-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಮತ್ತು ಎಲ್.ಎಲ್.ಬಿ ಪದವಿಧರರಾದ ಇವರು ಗೃಹಿಣಿಯಾಗಿದ್ದು, ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ. ಇವರು ೨೦೧೯ರಲ್ಲಿ `ನಮ್ಮೊಳಗಿನರಿವು' ಮತ್ತು `ಪರಿಧಿ' ಎಂಬ ಕವನ ಸಂಕಲನಗಳು ಪ್ರಕಟಿಸಿದ ಇವರು ಕೆಲ ಹಾಸ್ಯ, ವೈಚಾರಿಕ ಲೇಖನ, ಲಲಿತ ಪ್ರಬಂಧಗಳು ಬರೆದಿದ್ದು ಅವು ಶಿವರಂಜನ್ ಸತ್ಯಂಪೇಟೆಯವರ `ಶರಣ ಮಾರ್ಗ’ ಮತ್ತು ಬಿ.ಎಚ್.ನಿರಗುಡಿಯವರ `ಸಾಹಿತ್ಯ ಸಾರಥಿ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೀದರನಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿಯರ ಸಾಹಿತ್ಯ ಸಮ್ಮೇಳನ, ಮತ್ತು ಕಲಬುರಗಿಯ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ ಕವಿಗೊಷ್ಠಿಗಳಲ್ಲಿಯೂ ಪಾಲ್ಗೊಂಡು ಕವನ ವಾಚನವು ಮಾಡಿರುತ್ತಾರೆ. ಸದ್ಯ ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ