ಪುಟಗಳು

ಭಾನುವಾರ, ಜನವರಿ 12, 2025

ಕ್ಷಿತಿಜ್ ಬೀದರ್

`ಕ್ಷಿತಿಜ್ ಬೀದರ್' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸಿ ನಾಡಿನಾದ್ಯಂತ ಖ್ಯಾತರಾದ ಇವರ ನಿಜನಾಮ `ಬಸವರಾಜ ಮಠಪತಿ' ಎಂದಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ನಾಗಯ್ಯ ಸ್ವಾಮಿ ಮಠಪತಿ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಎಂ.ಎ.ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ೧೯೮೩ರಲ್ಲಿ `ನಾನು ಮತ್ತು ನಮ್ಮವರು' (ಕವನಸಂಕಲನ) ೧೯೮೭ರಲ್ಲಿ `ಹೇಗಾದರೂ ಬದುಕು' (ವೈಚಾರಿಕ) `ಅಮಲು’, `ಪ್ರೀತಿಸಿದವನು ನೀನೊಬ್ಬನೆ ಅಲ್ಲ', `ಕಬ್ಬಿನ ಬನದಲ್ಲಿ', `ನಿಶ್ಯಬ್ದದೆಡೆಗೆ', `ಅಪರಿಚಿತರು', `ಹೊಸ್ತಿಲಾಚೆ', `ಬೆಲೆ', `ಕ್ಷಿತಿಜದೆಡೆಗೆ', `ಕತ್ತಲೋಳಗೆ', `ಪ್ರೀತಿ ಅರಳಿತ್ತು', `ಅಮಾತ್ರ', `ಅಸ್ಪಷ್ಟ', `ಕೀ-ರಿಂಗ್', `ಇ-ಮನಸ್ಸು@ವೀರಭದ್ರ'. (ಕಾದಂಬರಿಗಳು) `ಕಥೆಗಳು ಕಾಯುವುದಿಲ್ಲ', `ಅದ್ರುವ', 'ದರ್ಶನ', `ಅನರ್ಥ', `ಅಡ್ಡಫಲ', `ಬೇರಿಲ್ಲದ ಹೂ ಗರಿ', `ನೆರಳಿನಷ್ಟೇ ಕತ್ತಲು', (ಕಥಾ ಸಂಕಲನಗಳು) `ಪತ್ತೆದಾರಿ ಇರುವೆ' ಮತ್ತು `ಗಿಳಿಮಣಿ' (ಮಕ್ಕಳ ಕಥಾಸಂಕಲನಗಳು) `ಭಾವಸುದ್ದಿ', 'ದೇಹವೆ ದೇಗುಲ', `ಕ್ಷಣಿಕ', `ಪ್ರಜ್ಚಾಯಾನ', `ಮನತುಂಬಿ', (ಚಿಂತನೆ) `ಶಿಖರ ಜ್ಯೋತಿ', `ಹಿಪ್ಪುನೆರಳೆಯಿಂದ ರೇಷ್ಮೆ', `ಉದ್ಯಮ ಮಾಹಿತಿ' (ಲೇಖನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನ, ಕಾದಂಬರಿಗಳು ತುಷಾರ, ಮಯೂರ, ಪ್ರಜಾವಾಣಿ, ಕನ್ನಡ ಪ್ರಭ, ತರಂಗ ಉಷಾ, ಬೆಳಕಿಂಡಿ, ಚಂದನ, ಪ್ರಜಾರಂಗ ಸುಧಾ, ಕರ್ಮವೀರ, ರಾಗಸಂಗಮ, ನವರಾಗಸಂಗಮ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಕೆಲ ಕಾದಂಬರಿ ಬರಹಗಳು ಧಾರಾವಾಹಿ ಅಂಕಣ ಬರಹಗಳಾಗಿಯೂ ಪ್ರಕಟವಾಗಿವೆ. ಸದ್ಯ ಇವರು ತುಮಕೂರಿನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ