ಭಾನುವಾರ, ಜನವರಿ 12, 2025
ಶಶಿಕಲಾ ಎಸ್.ಗಿರಿ
ಸಾಹಿತಿ ಶಶಿಕಲಾ ಎಸ್.ಗಿರಿಯವರು ಬೀದರ ಜಿಲ್ಲೆ ಬಸವಕಲ್ಯಾಣದ ವೀರಭದ್ರಪ್ಪ ದುರ್ಗೆ ಮತ್ತು ಕಾಶಿಬಾಯಿ ದುರ್ಗೆ ದಂಪತಿಗಳಿಗೆ ದಿನಾಂಕ ೬-೧೨-೧೯೪೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಓದಿದ ಇವರು ಬೀದರದ ಲಾಡಗೇರಿಯ ಡಾ.ಶರಣಪ್ಪ ಗಿರಿಯವರ ಧರ್ಮ ಪತ್ನಿಯಾಗಿದ್ದಾರೆ. ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು `ಅಕ್ಕಮಹಾದೇವಿಯ ೧೦೮ ನಾಮಾವಳಿ' ಮತ್ತು `ಗಿರಿ ಕೋಗಿಲೆ' ಎಂಬ ಜಾನಪದ ಗೀತೆಗಳ ಸಂಗ್ರಹ, `ಶಶಿ ಶರಣ' ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಪ್ರವಾಸ ಕಥನವು ಬರೆದಿದ್ದು ಅದು ಅಪ್ರಕಟಿತವಾಗಿವೆ. ಇವರಿಗೆ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಕಲಬುರಗಿಯಲ್ಲಿ ನಡೆದ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮ್ಮಾನ ಮತ್ತು ಕಲಬುರಗಿಯ ಅಡಿಯಲ್ ಸಂಸ್ಥೆಯಿAದ ವುಮನ್ ಸುಭದ್ರ ಕುಟುಂಬ ಮತ್ತು ಆರೋಗ್ಯ ಪೂರ್ಣ ಸಮಾಜಕ್ಕೆ ಮಾದರಿ ಮಹಿಳೆಯೆಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೀದರನಲ್ಲಿ ನಡೆದ ೧೮ನೇ ಅಖಿಲ ಭಾರತ ಮಹಿಳಾ ಕವಯತ್ರಿಯರ ಸಮ್ಮೇಳನ ಸೇರಿದಂತೆ ಮೊದಲಾದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೮ರಲ್ಲಿ ಕಲಬುರಗಿಯ ಅನುಭವ ಮಂಟಪ ಮತ್ತು ಬಸವ ಸಮಿತಿಯ ಸಹಯೋಗದಲ್ಲಿ ನಡೆದ ಮಹಾದೇವಿಯಕ್ಕಂಗಳ ೧೧ನೇ ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಸದ್ಯ ಇವರು ಕಲಬುರಗಿಯ ವೆಂಕಟೇಶನಗರದ ನಿವಾಸಿಯಾಗಿದ್ದು ತಮ್ಮ ಓಣಿಯಲ್ಲಿಯ ಮುಕ್ತಾಯಕ್ಕ ಅಕ್ಕನ ಬಳಗದ ವತಿಯಿಂದ ಪ್ರತಿ ಸೋಮವಾರ ಶರಣರ ಕುರಿತು ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ಸಂಗ್ರಹಿಸಿದ ಜಾನಪದ ಹಾಡುಗಳು ಕಲಬುರಗಿ ಆಕಾಶವಾಣಿಯಿಂದಲೂ ಹಾಡಿ ಪ್ರಸಾರ ಮಾಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ