ಭಾನುವಾರ, ಜನವರಿ 12, 2025
ಕಲಾವತಿ ಬಿರಾದಾರ
ಹಿರಿಯ ಕವಯತ್ರಿಯಾದ ಕಲಾವತಿ ಬಿರಾದಾರ. ಇವರು ಬೀದರದ ಕಲ್ಲಪ್ಪ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೧೬-೬-೧೯೪೯ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಗೃಹಿಣಿಯಾಗಿ ಕವನ, ಲೇಖನ,ಆಧುನಿಕ ವಚನಗಳು ಬರೆದಿದ್ದಾರೆ. ೨೦೦೨ರಲ್ಲಿ `ಭಾವ ಸಂಗಮ' ೨೦೦೭ರಲ್ಲಿ `ಭಾವ ಕುಸುಮ' (ಕವನ ಸಂಕಲನಗಳು) ೨೦೧೫ರಲ್ಲಿ `ನುಡಿ ಬೆಳಗು' (ಆಧುನಿಕ ವಚನ ಸಂಕಲನ) ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು `ಸ್ತ್ರೀ ಜಾಗೃತಿ' ಮಾಸಪತ್ರಿಕೆ ಸೇರಿದಂತೆ ಕೆಲ ಸ್ಥಳಿಯ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ೨೦೦೬ರಲ್ಲಿ ಬೀದರಿನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಸಾಹಿತ್ಯ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರಿನಲ್ಲಿ ವಾಸವಾಗಿದ್ದು, ತಮ್ಮ ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ