ಭಾನುವಾರ, ಜನವರಿ 12, 2025
ಎಂ.ಜಿ.ಗಂಗನಪಳ್ಳಿ
`ಸಾನೆಟ್ ಕವಿ’ ಎಂದೆ ಖ್ಯಾತಿ ಪಡೆದ ಹಿರಿಯ ಕವಿ,ಸಾಹಿತಿ, ಎಂ.ಜಿ.ಗAಗನಪಳ್ಳಿ ಇವರು ಬೀದರ ತಾಲೂಕಿನ ಸಿಕಂದರಾಪೂರ ಗ್ರಾಮದ ಗುಂಡಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨-೮-೧೯೪೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಾಗಿ, ಮೊರಾರ್ಜಿ ಶಾಲಾ ಪ್ರಾಚಾರ್ಯರಾಗಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೦೬ರಲ್ಲಿ ನಿವೃತ್ತರಾಗಿದ್ದಾರೆ.
ಕಾವ್ಯ ರಚನೆಯಲ್ಲಿಯೆ ಹೆಚ್ಚು ಒಲವು ಹೊಂದಿ ಕಾವ್ಯ ಮತ್ತು ಸಾನೇಟ್ ರಚಿಸಿ ೧೯೭೮ರಲ್ಲಿ `ಬಾಳ ಹಂದರ’ ೧೯೮೮ರಲ್ಲಿ `ಗೊಮ್ಮಟಗಿರಿಯಲ್ಲಿ' ೧೯೯೩ರಲ್ಲಿ `ಕಾವ್ಯ ಕುಂಜ' ೨೦೦೬ರಲ್ಲಿ `ವನಸಿರಿ' ೨೦೦೭ರಲ್ಲಿ `ಸುನೀತ ಸೌರಭ' ೨೦೦೮ರಲ್ಲಿ `ಕಾವ್ಯ ಚಂದ್ರಿಕೆ' ೨೦೦೯ರಲ್ಲಿ `ಕನ್ನಡ ಜನಪದ ಭುವನೇಶ್ವರಿ’, `ಗೀತ ಗುಚ್ಚ’, `ಗೀತಧಾರೆ' ಎಂಬ ಕವನ ಸಂಕಲನಗಳು, ೨೦೧೦ರಲ್ಲಿ `ಶ್ರೀ ರೇವಪ್ಪಯ್ಯನವರ ಸುಪ್ರಭಾತ’ ೨೦೧೧ರಲ್ಲಿ `ಗಾಂಧಿ ನಮನ’ `ಗಾಂಧಿ ವಂದನೆ’ (ಹಿಂದಿ) `ಧ್ವನಿ ಕೊಟ್ಟ ಧಣಿ’ `ಜನಸ್ಪಂದನ’ ಎಂಬ ಸುಪ್ರಭಾತ ಕೃತಿಗಳು, ೨೦೧೬ರಲ್ಲಿ `ವಿಮರ್ಶಾ ಮಂಜರಿ’ ೨೦೧೭ರಲ್ಲಿ `ವಿಮರ್ಶೆ ವಲ್ಲರಿ’ ೨೦೧೯ರಲ್ಲಿ `ವಿಮರ್ಶೆ ಅಭಿಸಾರಿಕೆ’ ಎಂಬ ವಿಮರ್ಶಾ ಕೃತಿಗಳು, ೧೯೯೨ರಲ್ಲಿ `ತಾಯಿ ನಿನ್ನ ನೆನಪು ಏನೆಂದ ಸೈಪು’ ೨೦೦ರಲ್ಲಿ `ಸ್ಕೌಟ್ ಮತ್ತು ಗೈಡ್ಸ್’ ೨೦೧೩ರಲ್ಲಿ `ಔಷಧಿ ಗಿಡ ಮೂಲಿಕೆಗಳು’ ಎಂಬ ಸಂಪಾದನೆ. `ಸಮತೆಯ ಹಕ್ಕಿಯ ಹಾಡು' ಎಂಬ ಖಂಡಕಾವ್ಯ, ೧೯೯೯ರಲ್ಲಿ `ಗಾದೆಗಳ ಜೋತೆಗೆ ಗೆಳೆತನ ಮಾಡು’ ೨೦೧೪ರಲ್ಲಿ `ದಿವ್ಯತ್ರಯರ ಕಾವ್ಯ ಗಂಗೆ’ ೨೦೧೭ರಲ್ಲಿ `ವಿವೇಕಾನಂದರಿಗೆ ನನ್ನ ಸುನೀತಗಳು’ ೨೦೧೮ರಲ್ಲಿ `ಶಿವಲಿಂಗ ಶಿವಯೋಗ’, `ಬಕ್ಕಪ್ಪ ನಾಗೂರೆ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೧೯೯೯ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಧಾರವಾಡದ ಚಿಲಿಪಿಲಿ ಪ್ರಕಾಶನದಿಂದ ಶಿಕ್ಷಣ ಸಿರಿ ಪ್ರಶಸ್ತಿ, ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವಿತೆಗಳು ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿಯು ಪ್ರಕಟವಾಗಿವೆ. ಮತ್ತು ಇವರ ಕುರಿತು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯು ಸಾಕ್ಷ್ಯಚಿತ್ರವು ತಯಾರಿಸಿದೆ. ಇವರ `ಕರುನಾಡಿಗೆ ಗಡಿನಾಡಿನಾರತಿ’ ಎಂಬ ಗೀತೆಗಳ ಧ್ವನಿ ಸುರಳಿಯು ಮುದ್ರಣಗೊಂಡಿದ್ದು ಇದು ಗುಲಬರ್ಗಾ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವು ಪಡೆದಿದೆ. ಆಕಾಶವಾಣಿ, ದೂರದರ್ಶನದಲ್ಲಿಯು ಇವರ ಚಿಂತನಗಳು ಪ್ರಸಾರವಾಗಿವೆ. ೨೦೦೯ರಲ್ಲಿ ಬೇಲೂರಿನಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೦ರಲ್ಲಿ ಬೀದರನಲ್ಲಿ ನಡೆದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ