ಭಾನುವಾರ, ಜನವರಿ 12, 2025
ಎಸ್. ಕೆ. ಕಿನ್ನಿ
ಯುವ ಸಾಹಿತಿ ಎಸ್.ಕೆ.ಕಿನ್ನಿ. ಇವರ ಪೂರ್ಣನಾಮ ಶಿವಕುಮಾರ ತಂದೆ ಕಾಶಿನಾಥ ಕಿನ್ನಿ ಎಂದಾಗಿದೆ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಕಾಶಿನಾಥ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೨೪-೪-೧೯೮೧ರಲ್ಲಿ ಜನಿಸಿದ್ದಾರೆ. ಇವರು ಕಲಬುರಗಿಯಲ್ಲಿ ವಾಸವಿದ್ದು ತಮ್ಮ ಶಿಕ್ಷಣವನ್ನು ಕಲಬುರಗಿಯಲ್ಲಿಯೇ ಅಧ್ಯಯನ ಮಾಡಿ ಎಂ.ಬಿ.ಎ. ಮತ್ತು ಇಂಜಿನಿಯರಿAಗ್ ಪದವಿಧರಾಗಿ, ಸುಮಾರು ೧೫ವರ್ಷಗಳಿಂದ ವಿದ್ಯುತ್ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಬೆಂಗಳೂರಿನ ಪ್ರಸಿದ್ಧ ಕಂಪನಿಯೊAದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು `ಭಾವ ಬಿಂಬ' (ಕವನ ಸಂಕಲನ) `ವಿಜ್ಞಾನ ಬರಹಗಳು' (ವೈಚಾರಿಕ ಪ್ರಬಂಧ) `ಚಂದ್ರಶೇಖರ್ ಅಜಾದ್' (ಚರಿತ್ರೆ) `ಚಿಗುರು ಚೇತನ', `ಹೊಂಬೆಳಕು', `ಅವ್ವ', `ಅಪ್ಪ', `ಅಭಿವ್ಯಕ್ತಿ', `ಪ್ರಣತಿ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮಟ್ಟದ ಸಾಹಿತ್ಯ ಮಂದಾರ ಪ್ರಶಸ್ತಿ, ಹಾಗೂ ಬೆಂಗಳೂರಿನ ಜ್ಞಾನ ಮಂದಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರೆತ್ತಿದೆ. ರಾಜ್ಯ ಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವು ಪಡೆದಿದೆ. ಕಲಬುರಗಿಯಲ್ಲಿ ಯುವ ಅಜಾಧ ವಿಚಾರ ವೇದಿಕೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಕೆಲ ಪ್ರಾತಿನಿಧಿಕ ಕೃತಿಗಳು ಪ್ರಕಟಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ