ಭಾನುವಾರ, ಜನವರಿ 12, 2025
ರಶ್ಮಿ ಎಸ್.
ಕವಯತ್ರಿ ಹಾಗೂ ಪತ್ರಕರ್ತರಾದ ರಶ್ಮಿ ಎಸ್ ರವರು ಬೀದರದ ಶರಣಬಸಯ್ಯಾ ಮತ್ತು ಭಾರತಿ ದಂಪತಿಗಳಿಗೆ ದಿನಾಂಕ ೪-೯-೧೯೭೮ರಲ್ಲಿ ಜನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಪ್ರಜಾವಾಣಿಯಲ್ಲಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು `ಅಂತರಾಳ' (ಕವನ ಸಂಕಲನ) `ಅಂಕುರ' (ಅಂಕಣ ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಪ್ರಜಾವಾಣಿಯ ಗ್ರಾಮೀಣ ವಿಭಾಗ, ಜನರಲ್ ಡೆಸ್ಕ್ ಪುರವಣಿಗಳಲ್ಲಿ ಕೆಲಸ ಮಾಡಿದ್ದಾರೆ. ಭೂಮಿಕಾ, ಶಿಕ್ಷಣ, ಕ್ಷೇಮಕುಶಲ, ಗುಲ್ಮೊಹರ್ ಪುರವಣಿಗಳನ್ನು ರೂಪಿಸಿ, ನಿರ್ವಹಿಸಿದ್ದು, ೨೦೧೬ರಲ್ಲಿ ಶಾಲಾ ಆವೃತ್ತಿ ‘ಸಹಪಾಠಿ’ಯನ್ನು ರೂಪಿಸಿ, ನಿರ್ವಹಿಸಿದ್ದಾರೆ. ೨೦೧೩ರಿಂದ ೨೦೧೫ರ ಮಾರ್ಚ್ವರೆಗೂ ‘ಮೃದುಲಾ’ ಎಂಬ ಹೆಸರಿನಲ್ಲಿ ‘ಮಿದುಮಾತು’ ಅಂಕಣವನ್ನು ನಿರ್ವಹಿಸಿರುತ್ತಾರೆ. ೨೦೦೭ರಿಂದ ೨೦೧೧ರವರೆಗೆ ಕಲಬುರ್ಗಿ ಬ್ಯುರೊ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು, ಗ್ರಾಮೀಣ ಪತ್ರಿಕೋದ್ಯಮ, ಅಭಿವೃದ್ಧಿಪರ ಪತ್ರಿಕೋದ್ಯಮದ ಅನುಭವವು ಹೊಂದಿದ್ದಾರೆ. ಮತ್ತು ಪತ್ರಿಕೋದ್ಯಮದ ಎಲ್ಲ ೨೦೧೮ರ ಮೇ ತಿಂಗಳಿನಿAದ ೨೦೧೯ರವರೆಗೆ ಬೆಂಗಳೂರು ಮೆಟ್ರೊ ತಂಡವನ್ನು ಮುನ್ನಡೆಸಿ. ೨೦೧೧ರಲ್ಲಿ ನಡೆದ ಬೆಳಗಾವಿಯ ೨ನೇ ವಿಶ್ವಕನ್ನಡ ಸಮ್ಮೇಳನ, ಹಾಗೂ ಗಂಗಾವತಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಉತ್ತಮ ವರದಿಗಾರಿಕೆಯು ಮಾಡಿದ್ದಾರೆ. ಮತ್ತು ೨೦೧೯ರಲ್ಲಿ ಯುವ ಸಂಸದ ರಾಜ್ಯಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿಯು ಸೇವೆ ಸಲ್ಲಿಸಿದ್ದಾರೆ, ೨೦೦೯ರಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರದಿAದ ಮಹಿಳಾ ಸಬಲೀಕರಣಕ್ಕಾಗಿ ‘ಸೂರ್ಯಮುಖಿ’ ಎಂಬ ಸರಣಿ ಕಾರ್ಯಕ್ರಮವನ್ನು ನೀಡಿದ್ದಾರೆ. ಮತ್ತು ಆಕಾಶವಾಣಿಯ ಡ್ರಾಮಾ ಬಿ. ಹೈ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಬರೆದ ಪ್ರಜಾವಾಣಿಯ ಶಿಕ್ಷಣ ಪುರವಣಿ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಳಸಿಕೊಂಡಿದ್ದಾರೆ. ಇವರು ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೀದರ ಜಿಲ್ಲಾ ಆಡಳಿತವು ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಕಲಬುರಗಿಯ ರೋಟರಿ ಕ್ಲಬ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ