ಪುಟಗಳು

ಭಾನುವಾರ, ಜನವರಿ 12, 2025

ವಿ.ರಾ.ಚಾಂಬಾಳ

ದಲಿತಕವಿ ವಿ.ರಾ.ಚಾಂಬಾಳ ರವರ ಪೂರ್ಣ ನಾಮ ವಿಠಲ ತಂದೆ ರಾಮಚಂದ್ರ ಚಾಂಬಾಳ ಎಂದಾಗಿದೆ. ಇವರು ಬೀದರ ತಾಲೂಕಿನ ಚಾಂಬಾಳ ಗ್ರಾಮದ ರಾಮಚಂದ್ರ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೬-೧೯೪೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ೧೯೬೯ರಲ್ಲಿ ಕಲಬುರಗಿಯ ಸರ್ಕಾರಿ ಮುದ್ರಣಾಲಯದಲ್ಲಿ ಸಹಾಯಕ ಯಂತ್ರ ಚಾಲಕರಾಗಿ, ಅಗ್ರ ಕಾರ್ಮಿಕ, ಪೊರಮನ್ ಆಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತಿಯಾಗಿದ್ದಾರೆ. ಮತ್ತು ಇವರು ೧೯೮೦ರಲ್ಲಿ ಭೀಮ ಗೀತೆ, ೧೯೮೮ರಲ್ಲಿ ಭೀಮನಾಮ ಗೀತಾವಳಿ, ೧೯೮೯ರಲ್ಲಿ ಭೀಮ ಭಜನೆ, ೧೯೯೦ರಲ್ಲಿ ಭೀಮ ಜ್ಯೋತಿ, ೧೯೯ರಲ್ಲಿ ಭೀಮ ಬೆಳಕು, ೨೦೦೨ರಲ್ಲಿ ಭೀಮ ಧ್ವನಿ, ೨೦೦೩ರಲ್ಲಿ ಭೀಮ ಶಕ್ತಿ, ೨೦೦೫ರಲ್ಲಿ ಭೀಮ ಸ್ವಾಭಿಮಾನಿ, ೨೦೦೬ರಲ್ಲಿ ಭೀಮ ಸಿಡಿಲು, ೨೦೦೭ರಲ್ಲಿ ಭೀಮ ಮಂಗಲ. ಎಂಬ ಅಂಬೇಡ್ಕರ್ ಕುರಿತಾದ ಗೀತೆಗಳು ಮತ್ತು ೨೦೧೧ರಲ್ಲಿ ಬುದ್ಧ-ಭಾನು ಭೀಮ-ಕಿರಣ, ೨೦೧೨ರಲ್ಲಿ ಮಾನವ ಯಾರು ? ೨೦೧೩ರಲ್ಲಿ ಸ್ವರ್ಗ ಮತ್ತು ನರಕ, ೨೦೧೪ರಲ್ಲಿ ಪ್ರೀತಿ ಮತ್ತು ಸಂಬAಧಗಳು, ೨೦೧೫ರಲ್ಲಿ `ಶಾಂತಿಯ ಕೇಂದ್ರ, ಮತ್ತು ಬೌದ್ಧ ಧರ್ಮದ ತಿರುಳು.’ ಎಂಬ ವೈಚಾರಿಕ ಬೌದ್ಧ ಸಾಹಿತ್ಯ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೧೨ರಲ್ಲಿ ಭಾರತೀಯ ದಲಿತ ಸಾಹಿತ್ಯ ಪರಿಷತ್ತು ನವದೆಹಲಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ, ಕಲಬುರಗಿ ಕಸಾಪದಿಂದ ಭೀಮ ಕವಿ ಪ್ರಶಸ್ತಿ, ಖರ್ಗೆ ೭೨ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಕುಶಾಗ್ರಮತಿ ಖರ್ಗೆ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ೨೦೧೪ರಲ್ಲಿ ಮೈಸೂರು ದಸರಾ ಕವಿಗೊಷ್ಠಿಯಲ್ಲಿ, ೨೦೨೦ರಲ್ಲಿ ಕಲಬುರಗಿಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ