ಭಾನುವಾರ, ಜನವರಿ 12, 2025
ಕು. ವಚನಾ ಶ್ರೀ
ಬಾಲ ಕವಯತ್ರಿ, ಕು.ವಚನಾಶ್ರೀ ಯವರು ಬೀದರದ ಸಂಜಯ ಮೈನಳ್ಳಿ ಮತ್ತು ಡಾ.ಜಗದೇವಿ ದಂಪತಿಗಳಿಗೆ ದಿನಾಂಕ ೭-೧೧-೨೦೦೬ ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯ ಗುರುನಾನಕ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯಾದ ಇವರು ಸಾಹಿತಿ ಡಾ.ಜಗದೇವಿ ತಿಬಶೆಟ್ಟಿಯವರ ಪುತ್ರಿಯಾಗಿದ್ದು, ತಮ್ಮ ತಾಯಿಯ ಸಾಹಿತ್ಯದ ಪ್ರಭಾವದಿಂದಾಗಿ ಕತೆ, ಕವನಗಳನ್ನು ಬರೆಯುತ್ತಿದ್ದಾರೆ . ಮತ್ತು ೨೦೨೦ರಲ್ಲಿ `ಕಂಗಳ ಅಂಗಳ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಲೋಕ ದೃಷ್ಠಿ’ ಎಂಬ ಮತ್ತೊಂದು ಕವನ ಸಂಕಲನ ಮುದ್ರಣದ ಹಂತದಲ್ಲಿದೆ. ಇವರಿಗೆ ರಾಜ್ಯ ಮಟ್ಟದ ಬಾಲ ಪ್ರತಿಭಾ ರತ್ನ, ಶಿಶು ಪ್ರತಿಭಾ ರತ್ನ, ಅಶ್ವಿನಿ ರತ್ನ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ