ಭಾನುವಾರ, ಜನವರಿ 12, 2025
ರಾಮಾ ಪವಾರ
ಉದಯೋನ್ಮುಖ ಯುವ ಕವಿ ರಾಮಾ ಪವಾರ. ಇವರ ನಿಜನಾಮ ರಾಜು ತಂದೆ ಮಾರುತಿ ಪವಾರ ಎಂದಾಗಿದೆ. ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಮಾರುತಿ ಮತ್ತು ರಂಗಾಬಾಯಿ ದಂಪತಿಗಳಿಗೆ ದಿನಾಂಕ ೨-೪-೨೦೦೧ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಅಭ್ಯಾರ್ಥಿಯಾಗಿರುವ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ `ಅಂಕುರ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಎಳವೆ ಕವಿ ಬಾಲ ರವಿ', `ವಸಂತಗಾನ', 'ಹೂವಿಗೆ ಬಿದ್ದ ಸುಂದರ ಕನಸ್ಸು' ಎಂಬ ಕವನ, ಹನಿಗವನ ಸಂಕಲನಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರು ಬಾಲ್ಯದಲ್ಲಿಯೆ ಪುಸ್ತಕ ಪ್ರಕಟಿದರಿಂದ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಬಾಲ ಪ್ರತಿಭಾ ರತ್ನ ಪ್ರಶಸ್ತಿ, ಕಲಬುರಗಿಯ ವಿಶ್ವ ಜ್ಯೋತಿ ಪ್ರತಿಷ್ಠಾನದವರು ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆದಲ್ಲಿ ಪೂರ್ತಿ ಅಂಕ ಗಳಿಸಿದ್ದರಿಂದ ಅಂಕವೀರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ರಾಯಚೂರಿನ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಇವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಕಷ್ಟು ಕವಿಗೊಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ