ಪುಟಗಳು

ಭಾನುವಾರ, ಜನವರಿ 12, 2025

ಕಪಿಲ ಹುಮನಾಬಾದೆ

. ಹೊಸ ತಲೆಮಾರಿನ ಯುವ ಸಾಹಿತಿ ಕಪಿಲ ಹುಮನಾಬಾದೆ. ಇವರು ಬೀದರ ತಾಲೂಕಿನ ನೌಬಾದ ಹತ್ತಿರದ ಅಲಿಯಾಬಾದ್ ಗ್ರಾಮದ ಪ್ರಭು ಮತ್ತು ಬೇಬಾವತಿ ದಂಪತಿಗಳಿಗೆ ದಿನಾಂಕ ೨೫-೧-೧೯೯೬ರಲ್ಲಿ ಜನಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎ. ಅರ್ಥಶಾಸ್ತ್ರ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಇವರು ಬಾಲ್ಯದಿಂದಲೂ ಕತೆ, ಕಾದಂಬರಿ, ಕವನ, ಲೇಖನ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೯ರಲ್ಲಿ `ಹಾಣಾದಿ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ವಿಮರ್ಶಾ ಲೇಖನಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಮಯೂರ, ಸುಧಾ, ಹೊಸತು ಕೆಂಡ ಸಂಪಿಗೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೮ರಲ್ಲಿ ಬೆಂಗಳೂರಿನ ಜಯಲಕ್ಷ್ಮಿ ಪಾಟೀಲ್ ಅವರ `ಈ ಹೊತ್ತಿಗೆ’ ಕಥಾ ಬಹುಮಾನ ಮತ್ತು ವಿಜಯ ಕರ್ನಾಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಟಾಪ್ ೨೫ ಕತೆಗಳಲ್ಲಿ ಇವರ `ಬಾಗಿಲು’ ಎಂಬ ಕತೆ ೫ನೇ ಸ್ಥಾನ ಪಡೆದು ಪುಸ್ತಕ ರೂಪದಲ್ಲಿ ಮುದ್ರಣಗೊಂಡಿದೆ. ಹಾಗೂ ೨೦೨೦ ರ ಪ್ರಜಾವಾಣಿ ಪತ್ರಿಕೆಯ ಯುವ ಕಾದಂಬರಿಕಾರ ಸಾಧಕ ಪ್ರಶಸ್ತಿ, ೨೦೨೦ರಲ್ಲಿ `ಹಾಣಾದಿ’ ಕಾದಂಬರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಯು ಲಭೀಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ