ಪುಟಗಳು

ಭಾನುವಾರ, ಜನವರಿ 12, 2025

ಡಾ.ಕಾಶಿನಾಥ ಅಂಬಲಗೆ

ಹಿರಿಯ ಸಾಹಿತಿ ಹಾಗೂ ಅನುವಾದಕರಾದ ಡಾ.ಕಾಶಿನಾಥ ಅಂಬಲಗೆಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಚಳಂಬಿ ಗ್ರಾಮದ ರಾಚಪ್ಪ ಮತ್ತು ಗುರಮ್ಮ ದಂಪತಿಗಳಿಗೆ ದಿನಾಂಕ ೧೦-೭-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿಎಚ್.ಡಿ ಪದವಿಧರರಾದ ಇವರು ಪದವಿ ಕಾಲೇಜು ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಮೂವತ್ತೈದು ಕವನಗಳು, ಇನ್ನಷ್ಟು ಕವನಗಳು, ಕೌದಿ, ಹುಲ್ಲು ಮೇಲಿನ ಹನಿಗಳು, ಚುಳುಕಾದಿರಯ್ಯ, ಬೇವು-ಬೆಲ್ಲ, ಹಾಡುಗಳು ಉಳದಾವ, ಮೂವತ್ತಕ್ಕೆ ಮುನ್ನೂರು, ಶರಣು ಶರಣಾರ್ಥಿ ಗಜಲ್ ಗಳು. ಎಂಬ ಕವನ ಸಂಕಲನಗಳು, ಕಬೀರದಾಸರು, ಜ್ಞಾನ ಪೀಠ ಪ್ರಶಸ್ತಿ ವಿಜೇತ ಗುಜರಾತಿ ಕವಿ ಉಮಾಶಂಕರ ಜೋಶಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಭಗತ್ ಸಿಂಗ್, ಜಗದ ಮಹಾ ನಟ ಚಾರ್ಲಿಚಾಂಪ್ಲಿನ್, ಮಹಾತ್ಮ ಜ್ಯೋತಿಬಾಪುಲೆ, ನಾರಾಯಣ ಗುರು, ಡಾ.ರಾಜಕುಮಾರ, ಸಾವಿತ್ರಿಬಾಯಿ ಪುಲೆ, ಸ್ವಾಮಿ ವಿವೇಕಾನಂದ, ಬಾಬಾ ಆಮಟೆ, ಜಗದಗಲ ಮುಗಿಲಗಳು, ದಾರಿ ದೀಪಗಳು, ಶಿವಶರಣೆಯರು ಹಾಗೂ ಮಹಿಳಾ ಸಂಪನ್ಮೂಲ, ವಚನ ಸಾಹಿತ್ಯ- ಸಂತ ಸಾಹಿತ್ಯ, ವಚನ ಬೆಳಕು, ಸತಿಯೆ ಸಾಕಿಯಾದ ಕವಿ ಸಮಯ, ವಚನವಿಚಾರೋತ್ಸವ, ಗಾಂಧಿ ವಿಚಾರಧಾರೆ, ಆಯ್ದ ೭೨ ಅನಿಕೇತನ ಕನ್ನಡ ಗಜಲ್ ಗಳು, ಆಯ್ದ ೭೧ ಕವಿತೆಗಳು, ಆಯ್ದ ೭೧ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಅನಿಕೇತನ ಕನ್ನಡ ಕವಿತೆಗಳು, ಇತ್ಯಾದಿ ಅವರ ಕನ್ನಡದ ಪ್ರಮುಖ ಕೃತಿಗಳು ರಚಿಸಿದ್ದಾರೆ. `ಅಧೂರೆ ಶಬ್ದ, ಸಂತ ಔರ ಶಿವಶರಣೋಂ ಕೆ ಕಾವ್ಯ ಮೇ ಸಾಮಾಜಿಕ ಚೇತನಾ, ಶರಣ ಔರ ಸಂತ: ಸಾಮಾಜಿಕ ಚಿಂತನ, ಬಸವೇಶ್ವರ: ಕಾವ್ಯ ಶಕ್ತಿ ಔರ ಸಾಮಾಜಿಕ ಶಕ್ತಿ, ವಚನ ಸಾಹಿತ್ಯ ಔರ ಸಂತ ಸಾಹಿತ್ಯ ಕಾ ಸಮಾಜ ಶಾಸ್ತ್ರ, ಬಾರವಿ ಶಾದೀ ಕೀ ಕನ್ನಡ ಕವಿತ್ರಿ ಅಕ್ಕಮಹಾದೇವಿ ಔರ ಸ್ತ್ರೀ ವಿಮರ್ಶ, ಬಸವಾದಿ ಶರಣೋಂ ಕೆ ಸಾಹಿತ್ಯ ಕಿ ಸಾಮಾಜಿಕ ಚೇತನಾ, ಸಿದ್ದರಾಮೇಶ್ವರ, ಗಾಂದಿಗಿರಿ, ಬಸವೇಶ್ವರ ಸಮತಾ ಕಿ ಧ್ವನಿ, ಅಲ್ಲಮಪ್ರಭು: ಪ್ರತಿಭಾ ಕಾ ಶಿಬಿರ, ಚೆನ್ನ ಬಸವಣ್ಣ: ಮಹಾಜ್ಞಾನಿ, ಮೋಳಿಗೆ ಮಾರಯ್ಯ, ಮೋಳಿಗೆ ಮಹಾದೇವಿ, ಆಯ್ದಕ್ಕಿ ಮಾರಯ್ಯ- ಲಕ್ಕಮ್ಮ, ಹಡಪದ ಅಪ್ಪಣ- ಲಿಂಗಮ್ಮ, ಉರಿಲಿಂಗ ಪೆದ್ದಿ - ಕಾಳವ್ವೆ, ವಚನ ಚಿಂತನ, ಕಾವ್ಯ ಕೇವಲ ಕಾವ್ಯ. ಇವು ಅವರು ಬರೆದ ಹಿಂದಿ ಭಾಷೆಯ ಕೃತಿಗಳು. ಅಷ್ಟೇಯಲ್ಲದೆ ಇವರು ಅನುವಾದಕರಾಗಿಯು ಉತ್ತಮ ಕೃಷಿ ಮಾಡಿದ್ದಾರೆ. ಹಿಂದಿ ಭಾಷೆಯಿಂದ ಕನ್ನಡಕ್ಕೆ ೧೯. ಕನ್ನಡದಿಂದ ಹಿಂದಿಗೆ ೫ಕೃತಿಗಳು ಅನುವಾದಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಸಾಹಿತ್ಯ ರಚಿಸುವುದರೊಂದಿಗೆ ಆ ಎರಡು ಭಾಷೆಗಳಲ್ಲಿ ಒಟ್ಟು ಇಲ್ಲಿಯವರೆಗೆ ೮೭ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕವನಗಳು ಪಂಜಾಬಿ, ಉರ್ದು, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಮತ್ತು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಇವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಮತ್ತು ಬೀದರದ ೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯು ಇವರನ್ನು ಗೌರವಿಸಲಾಗಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ