ಪುಟಗಳು

ಭಾನುವಾರ, ಜನವರಿ 12, 2025

ಕಾವ್ಯಶ್ರೀ ಮಹಾಗಾಂವಕರ್

‘ಸಿಕಾ’ ಎಂಬ ಕಾವ್ಯನಾಮ ಹೊಂದಿರುವ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ಸಾಹಿತಿಗಳಾದ ಬಿ.ಜಿ.ಸಿದ್ದಬಟ್ಟೆ ಮತ್ತು ಯಶೋದಮ್ಮ ಸಿದ್ದಬಟ್ಟೆ ದಂಪತಿಗಳಿಗೆ ದಿನಾಂಕ ೧೧-೪-೧೯೬೯ರಲ್ಲಿ ಜನಿಸಿದ್ದಾರೆ. ಡಿ.ಇ.ಮತ್ತು ಸಿ.ಇ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಕಲಬುರಗಿಯ ಸುರೇಶ ಮಹಾಗಾಂವಕರ್ ರವರ ಧರ್ಮಪತ್ನಿಯಾಗಿದ್ದು, ಬಾಲ್ಯದಿಂದಲೇ ತಮ್ಮ ತಾಯಿಯ ಮಾರ್ಗದರ್ಶನದ ಮೂಲಕ ಸಾಹಿತ್ಯದ ಗೀಳು ಹಚ್ಚಿಕೊಂಡು ಕತೆ, ಕವನ, ಕಾದಂಬರಿ, ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಹಲವಾರು ಪತ್ರಿಕೆ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ‘ಪ್ರೇಮ ಕಾವ್ಯ’, ‘ಬೆಳಕಿನೆಡೆಗೆ’, ‘ಪ್ರಳಯದಲೊಂದು ಪ್ರಣತಿ’, ‘ಜೀವ ಜಗತ್ತಿಗೆ’, ‘ಜೇನಹ£’,’ ‘ಪಿಸುಮಾತುಗಳ ಜುಗಲ್’, ‘ಒಳ್ಕಲ್ಲ ಒಡಲು’, ‘ಬ್ಯಾಸರಿಲ್ಲದ ಜೀವ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಗೃಹಿಣಿಯಾಗಿದ್ದುಕೊಂಡು ೨೦೧೯ರಿಂದ ಪಿ.ಎಚ್.ಡಿ.ಅಧ್ಯಯನದೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ