ಪುಟಗಳು

ಶನಿವಾರ, ಜನವರಿ 11, 2025

ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿ

ಶರಣತತ್ವ ಪ್ರಚಾರ ಮತ್ತು ಸಾಹಿತ್ಯದಲ್ಲಿ ಕೃಷಿ ಮಾಡಿದ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮಿಜಿಯವರು. ಇವರ ಮೂಲನಾಮ `ಪೂಜ್ಯ ಶ್ರೀ ಶಿವಕುಮಾರ ಡಾಕುಳಗೆ ' ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಶ್ರೀ ಮಲ್ಲಯ್ಯ ಸ್ವಾಮಿ ಮತ್ತು ಶ್ರೀಮತಿ ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧೪-೧೧-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಕೆಲವರ್ಷ ಉತ್ತರ ಕರ್ನಾಟಕ ಪತ್ರಿಕೆ ವರದಿಗಾರರಾಗಿ, ಕೆಂಪುನೆಲ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ವಿಜಯವಾಣಿಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ ಪೂಜ್ಯರು ಸದ್ಯ ಬೆಂಗಳೂರಿನ ಕುಂಬಳಗೂಡಿನಲ್ಲಿರುವ `ಬಸವ ಗಂಗೋತ್ರಿ' ಆಶ್ರಮದ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾಗಿದ್ದಾರೆ. ಇವರು `ಅಂತರAಗ ದಿವ್ಯಜ್ಯೋತಿ', `ಅನುಭಾವದಮೃತ', `ಚಿಂತನ ಮಂಥನ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ೨ ಹಿಂದಿ ಸೇರಿ ೧೫ ಪ್ರವಚನ ಸಿ.ಡಿ.ಗಳು ಹೊರತಂದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಗುರುಬಸವ ಕಾರುಣ್ಯ’ ಎಂಬ ಇವರ ಜೀವನ ಚರೀತ್ರೆಯು ಮೈಸೂರಿನ ಸಿ.ದೊಡ್ಡ ವೀರಪ್ಪನವರು ಬರೆದು ಪ್ರಕಟಿಸಿದ್ದಾರೆ. ಇವರು ನವದೆಹಲಿ ಬಸವ ಮಂಟಪದ ಪ್ರಧಾನ ಸಂಚಾಲಕರಾಗಿ, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾಗಿ, ಫೆಡರೇಶನ್ ಆಫ್ ಇಂಡಿಯನ್ ರಿಲಿಜಸ್ ನ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾರೆ. ಮತ್ತು ಪೂಜ್ಯ ಲಿಂಗಾನAದ ಸ್ವಾಮೀಜಿಯವರ ಪ್ರವಚನದ ಪ್ರಭಾವದಿಂದ ವೈರಾಗ್ಯ ಹೊಂದಿ ಪೂಜ್ಯ ಮಾತೆ ಮಹಾದೇವಿಯವರಿಂದ `ಜಂಗಮ ದೀಕ್ಷೆ' ಗೈದು ಬಸವಾದಿ ಶರಣರ ಸೇವೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ