ಪುಟಗಳು

ಶನಿವಾರ, ಜನವರಿ 11, 2025

ಡಾ. ರಘುಶಂಖ ಭಾತಂಬ್ರಾ

`ರಘುಶಂಖ ಭಾತಂಬ್ರಾ' ಎಂಬ ಕಾವ್ಯನಾಮದಿಂದ ಖ್ಯಾತರಾದ ಇವರ ನಿಜನಾಮ ರಘುನಾಥ ಖರಾಬೆ ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರೆಪ್ಪ ಹಾಗೂ ಗುರಮ್ಮ ಎಂಬ ದಂಪತಿಗಳಿಗೆ ದಿನಾಂಕ ೧-೧-೧೯೭೦ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ. ಪದವಿಧರರಾಗಿ ಕೆಲಕಾಲ ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೯೯೮ರಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಎರಡು ಮುಖ', `ಹೊನ್ನ ದಿವಿಗೆ', `ಕೊನೆಯೆಂದು’ (ಕವನ ಸಂಕಲನಗಳು) `ವಚನ ಸಾಹಿತ್ಯ ಹೊಸ ಪರಿಕಲ್ಪನೆ' `ವಚನ ಸಂಪದ', `ಭೂಮಿಕೆ’ (ಲೇಖನ) `ಓರೆಗಲ್ಲು' (ವಿಮರ್ಶೆ) `ಚರಿತ್ರೆಯ ಸುತ್ತ' (ಸಂಶೋಧನೆ) `ಶ್ರೀಗಂಧ ಪ್ರಭುರಾವ ಕಂಬಳಿವಾಲೆ', `ಮಹಾದಾಸೋಹಿ ಪಥಿಕ', `ಶಿಕ್ಷಣ ಸಿರಿ ಡಾ.ಪೂರ್ಣಿಮಾ ಜಿ' (ಚರಿತ್ರೆಗಳು) `ಕರ್ನಾಟಕೇತರ ಶರಣ ಶರಣೆಯರು', `ಅಟ್ಟಳೆ ನಾಡಿನ ಅಣಿಮುತ್ತುಗಳು', `ವರ್ತಮಾನದೊಡಲು', `ಬೀದರ ಪ್ರಾದೇಶಿಕ ಸ್ವಾತಂತ್ರ‍್ಯ ಸಂಗ್ರಾಮ', `ನಡೆ-ನುಡಿ ಸಿದ್ದಾಂತವಾದಲ್ಲಿ', `ಅರ್ಚನೆ ಪೂಜೆ ನೇಮದಲ್ಲಿ', `ಲೋಕನಾಯಕ ಭೀಮಣ್ಣ ಖಂಡ್ರೆ ’ ಎಂಬ ೨೨ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಕಂಬಳಿವಾಲೆ ಸಮಿತಿ ಸ್ಥಾಪಿಸಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳು ನಡೆಸುತ್ತಿರುವ ಇವರು ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸದ್ಯ ಇವರು ಭಾಲ್ಕಿಯ `ಶಾಂತಿ ಕಿರಣ’ ದ್ವಿಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರ `ಹೊನ್ನ ದಿವಿಗೆ' ಎಂಬ ಕವನ ಸಂಕಲನ ಸೋಲಾಪುರ ವಿಶ್ವವಿದ್ಯಾಲಯದ ಕನ್ನಡ ಬಿ.ಎ.ವಿದ್ಯಾರ್ಥಿಗಳಿಗೆ ಪಠ್ಯವಾದರೆ `ಶ್ರೀಗಂಧ ಪ್ರಭುರಾವ ಕಂಬಳಿವಾಲೆ' ಎಂಬ ಕೃತಿಯು ನಾಂದೇಡದ ಸ್ವಾಮಿ ರಮಾನಂದ ವಿಶ್ವವಿದ್ಯಾಲಯದ ಬಿ.ಎ.ನಾಲ್ಕನೇ ಸೇಮಿಸ್ಟರ್ ವಿದ್ಯಾರ್ಥಿಗಳಿಗ ಪಠ್ಯ ಪುಸ್ತಕವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ