ಪುಟಗಳು

ಶನಿವಾರ, ಜನವರಿ 11, 2025

ಗಣಪತಿ ಭೂರೆ

`ಸರಿದ ನಕ್ಷತ್ರ' ಎಂಬ ಕಥಾ ಸಂಕಲನದಿAದ ಹೆಸರುವಾಸಿಯಾದ ಕತೆಗಾರರೆಂದರೆ ಗಣಪತಿ ಭೂರೆಯವರು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದ ಚನ್ನಮಲ್ಲಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್ ಪದವಿಧರರಾಗಿದ್ದು ಸದ್ಯ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ನನಗೊಂದು ಬಯಕೆ', `ಬೆಂಕಿಯೊಳಗಿನ ಬೆಳಕು' (ಕವನ ಸಂಕಲನಗಳು) `ಸರಿದ ನಕ್ಷತ್ರ' (ಕಥಾ ಸಂಕಲನ) ಈ ಕೃತಿಗೆ ಜನಸೇವಾ ಸಂಘದಿAದ ಉತ್ತಮ ಕಥಾ ಪ್ರಶಸ್ತಿಯು ಲಭಿಸಿದೆ. ಮತ್ತು `ನಾವು' (ಕಾದಂಬರಿ) ಇದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ. `ನಿಗೂಢ ಬದುಕು' (ಚಿಂತನಾತ್ಮಕ ಪ್ರಬಂಧಸAಕಲನ) ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. `ವಿದ್ಯೆಗೆ ಒದ್ದವ' ಎಂಬ ನಾಟಕ ಬರೆದಿದ್ದು ಅದು ಅಪ್ರಕಟಿತವಾಗಿದೆ. ಹೀಗೆ ಇವರು ಬರೆದ ಕತೆ, ಕವನ, ಕಾದಂಬರಿ ಸಾಹಿತ್ಯ ಸಾಧನೆಗೆ ಮೈಸೂರಿನಿಂದ ಕುವೆಂಪು ಕಾವ್ಯ ಪುರಸ್ಕಾರ, ಮತ್ತು ವರಕವಿ ಬೇಂದ್ರೆ ಕಾವ್ಯ ಪುರಸ್ಕಾರ ಲಭಿಸಿವೆ. ಅಷ್ಟೇಯಲ್ಲದೆ ನೂತನ ಸಾಹಿತ್ಯ ವಾರಪತ್ರಿಕೆಯವರು ಏರ್ಪಡಿಸಿದ ರಾಜ್ಯ ಮಟ್ಟದ `ಚುಟುಕು' ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಲಭಿಸಿದೆ. ಮತ್ತು ಭಾಲ್ಕಿ ತಾಲೂಕಾ `ರಾಜ್ಯೋತ್ಸವ ಪ್ರಶಸ್ತಿ' ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ