ಭಾನುವಾರ, ಜನವರಿ 12, 2025
ನಾಮದೇವ ಜ್ಯಾಂತೆ
ಸಾಹಿತಿ ನಾಮದೇವ ಜ್ಯಾಂತೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾತಂಭ್ರಾ ಗ್ರಾಮದ ಶಂಕ್ರೇಪ್ಪಾ ಮತ್ತು ಇಂದಿರಾಬಾಯಿ ದಂಪತಿಗಳಿಗೆ ದಿನಾಂಕ ೨೦-೭-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ ಪದವಿಧರರಾದ ಇವರು ಭಾಲ್ಕಿಯ ಶಾಂತಿವರ್ಧಕ ಡಿ.ಇಡಿ ಕಾಲೇಜಿನಲ್ಲಿ ೧೪ ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಜೇವರ್ಗಿಯ ಶ್ರೀ ಬಸವೇಶ್ವರ ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೧ರಲ್ಲಿ `ಭಾವನೆಗಳೆ ಹೀಗೆ' ಎಂಬ ಕವನಸಂಕಲನ, ೨೦೧೩ರಲ್ಲಿ `ಆಧುನಿಕ ಶಿಕ್ಷಣದ ಒಲವುಗಳು' ಎಂಬ ಡಿ.ಇಡಿ ವಿದ್ಯಾರ್ಥಿಗಳಿಗಾಗಿ ಬರೆದ ಪಠ್ಯ ಪುಸ್ತಕ ಆಧಾರಿತ ಕೃತಿ ಪ್ರಕಟಿಸಿದ್ದಾರೆ. ಇವರು ೨೦೦೦ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರದ (ಕಿಣ್ಣಿ) ಗ್ರಾಮದ ಜ್ಞಾನ ಸೂರ್ಯ ತರುಣ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಇವರ ಕವನ ಬಹುಮಾನಿತ ಬರಹವಾಗಿ `ಜ್ಞಾನ ಸೂರ್ಯ' ಎಂಬ ಮಚ್ಚೇಂದ್ರ ಪಿ ಅಣಕಲ್ ಸಂಪಾದಿಸಿದ ಕೃತಿಯಲ್ಲಿ ಪ್ರಕಟವಾಗಿದೆ. ಮತ್ತು ಬೆಂಗಳೂರಿನ `ವಿಶೂ' ಎಂಬ ಕವನ ಸಂಕಲನ ಸೇರಿದಂತೆ ಬೀದರ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಹಾಗೂ ಭಾಲ್ಕಿಯಲ್ಲಿ ಏರ್ಪಡಿಸಿದ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು, ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ