ಶನಿವಾರ, ಜನವರಿ 11, 2025
ಪಿ. ಕೆ. ಪ್ರಭು
ಕವಿ,ಸಾಹಿತಿ ಕಲಾವಿದ ಪಿ.ಕೆ.ಪ್ರಭು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ಪುಂಡಲೀಕ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಸಾಹಿತ್ಯ ಮತ್ತು ಸಂಗೀತದಲ್ಲಿ ತುಂಬ ಆಸಕ್ತರಾಗಿ `ಬುದ್ಧ ಭೀಮರ ಭಜನೆ ಗೀತೆಗಳು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಕವನ, ಹಾಡು, ಭಜನೆ ಗೀತೆ, ಭಾವಗೀತೆ, ಭಕ್ತಿ ಗೀತೆಗಳನ್ನು ಬರೆಯುವ ಇವರು ಸ್ವತಃ ಸಂಗೀತ ಸಂಯೋಜನೆ ಮಾಡಿ ಕರವೇ ಟ್ರಾಕ್, ಮದುವೆ ಮೊದಲಾದ ಸಾರ್ವಜನಿಕ ರಸಮಂಜರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡುವ ಕಲೆ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳು ನೀಡಿ ಕವಿ ಗಾಯಕರಾಗಿ ಹೆಸರುವಾಸಿಯಾಗಿದ್ದಾರೆ. ಮತ್ತು ಬೀದರನಲ್ಲಿ ನಡೆದ ಜಾನಪದ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ೨೦೧೯ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ನ್ಯಾಷನಲ್ ಫಿಲೋಸಫ್ ಅವಾರ್ಡ ಕೂಡ ಪಡೆದಿದ್ದಾರೆ. ಮತ್ತು ಭಾಲ್ಕಿ ತಾಲೂಕು ಉತ್ಸವ ಪ್ರಶಸ್ತಿ, ಜನಪರ ಉತ್ಸವ ಪ್ರಶಸ್ತಿಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ