ಶನಿವಾರ, ಜನವರಿ 11, 2025
ಡಾ.ವಿಕ್ರಮ ವಿಸಾಜಿ
ಸಾಹಿತಿ ಡಾ.ವಿಕ್ರಮ ವಿಸಾಜಿ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೋಹಿನೂರು ಗ್ರಾಮದ ಗುರುಲಿಂಗಪ್ಪ ವಿಸಾಜಿ ಮತ್ತು ಕಲಾವತಿ ವಿಸಾಜಿ ದಂಪತಿಗಳಿಗೆ ದಿನಾಂಕ ೧-೧೨-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಗಾಳಿ ಪಟ' (ಮಕ್ಕಳ ಕವನ ಸಂಕಲನ) ೧೯೯೦ರಲ್ಲಿ `ನನ್ನ ಸುತ್ತಲಿನ ಜನರು' ೧೯೯೪ರಲ್ಲಿ `ನೀವೇಕೆ ಕತ್ತಲೆ ಕಡೆ' ೨೦೦೦ ಇಸ್ವಿಯಲ್ಲಿ `ತಮಾಷಾ' ೨೦೦೬ರಲ್ಲಿ `ಗೂಡು ಕಟ್ಟುವ ಚಿತ್ರ' (ಕವನ ಸಂಕಲನಗಳು) ೨೦೦೩ರಲ್ಲಿ `ಇಥಕಾ' ಎಂಬ ಗ್ರೀಕ್ ಕೃತಿ ಇಂಗ್ಲೀಷನಿAದ ಕನ್ನಡಕ್ಕೆ, ೨೦೧೨ರಲ್ಲಿ `ನೌಪಂಖುಡಿಯಾ' ಎಂಬ ಕೃತಿ ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ. ೨೦೦೪ರಲ್ಲಿ `ಬೆಳಗಿನ ಮುಖ' ೨೦೧೦ರಲ್ಲಿ `ಮಾತು ಕೃತಿ' ಎಂಬ ವಿಮರ್ಶೆ ಕೃತಿಗಳು, ಮತ್ತು `ರಸಗಂಗಾಧರ' (ನಾಟಕ) ೨೦೦೧ರಲ್ಲಿ `ಕಂಬಾರರ ನಾಟಕಗಳು' ೨೦೦೬ರಲ್ಲಿ `ಜೀವ ಮಿಡಿತದ ಸದ್ದು' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ರಸಗಂಗಾಧರ ನಾಟಕ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ.ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಕವನಗಳು ೨೦೦೪ರಲ್ಲಿ ಪಿ.ಯು.ಸಿ.ಗೆ ೨೦೧೨ರಲ್ಲಿ ಎಂ.ಎ.ತರಗತಿಗಳಿಗೆ ಪಠ್ಯ ಪುಸ್ತಕಗಳಾಗಿವೆ. ಮತ್ತು ಕೆಲ ಕವಿತೆಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೧೦ರಲ್ಲಿ ಭಾರತೀಯ ಭಾಷಾ ಪರಿಷತ್ತು ಕಲ್ಕತ್ತಾದಿಂದ `ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕಾರ' ಲಭಿಸಿದೆ. ೨೦೧೧ರಲ್ಲಿ ಕಸಾಪದಿಂದ `ಶ್ರೀ ವಿಜಯ ಪ್ರಶಸ್ತಿ, ೨೦೧೧ರಲ್ಲಿ ಭಾಲ್ಕಿ ಮಠದಿಂದ `ಚನ್ನಬಸವ ಕಾಯಕ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜು ಪ್ರಶಸ್ತಿ, ಕ.ರಾ. ಬೆಲ್ಲದ ಕಾಲೇಜು ಮಂಡರಗಿ ಪ್ರಶಸ್ತಿ, ಜಿ.ಎನ್.ಎಸ್.ಕಾಲೇಜು ಧಾರವಾಡ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ