ಪುಟಗಳು

ಶನಿವಾರ, ಜನವರಿ 11, 2025

ಎಂ.ಪಿ.ಮುದಾಳೆ

ದಲಿತ, ಬಂಡಾಯ ಸಾಹಿತಿಯಾದ ಎಂ.ಪಿ.ಮುದಾಳೆ. ಇವರ ಪೂರ್ಣನಾಮ ಮಲ್ಲಪ್ಪ ತಂದೆ ಪೀರಪ್ಪ ಮುದಾಳೆ ಎಂದಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಚಂದಾಪೂರ ಗ್ರಾಮದ ಪೀರಪ್ಪಾ ಮತ್ತು ತೇಜಮ್ಮಾ ದಂಪತಿಗಳಿಗೆ ದಿನಾಂಕ ೧೫-೬-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೧೯೯೫ರಲ್ಲಿ `ಚಿಗುರಿದ ಕನಸ್ಸು' (ಕವನ ಸಂಕಲನ) ೨೦೦೬ರಲ್ಲಿ `ಕನ್ನಡ ಸಿನಿಮಾ ಕ್ವಿಜ್' (ಸಾಮಾನ್ಯ ಜ್ಞಾನ) ೨೦೧೦ರಲ್ಲಿ `ಪ್ರೀತಿಯೆ ನನ್ನುಸಿರು' (ಲೇಖನ) ೨೦೧೨ರಲ್ಲಿ `ಡಾ.ರಾಜ್ ಕಾವ್ಯ ಕಂಬನಿ' (ಸಂ) ೨೦೧೩ರಲ್ಲಿ `ರಂಗ ಕಲಾವಿದ ಶಂಭುಲಿAಗ ವಾಲ್ದೊಡ್ಡಿ' (ಚರಿತ್ರೆ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಮತ್ತು ಇವರು ನಿಮ್ಮ ದೂತ, ಲಂಕೇಶ್ ಪತ್ರಿಕೆ, ಪೋಲಿಸ್ ವರ್ಲ್ಡ, ಕೆಂಡ ಪತ್ರಿಕೆಗಳ ವರದಿಗಾರರಾಗಿ, `ನಾರಂಜಾ ಎಕ್ಸ್ ಪ್ರೆಸ್’ ಪತ್ರಿಕೆಯ ವ್ಯವಸ್ಥಾಪಕ ಪ್ರಧಾನ ಸಂಪಾದಕರಾಗಿ, `ಬೀದರ ಮಿರಾರ್' ಎಂಬ ಆಂಗ್ಲ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ನಾರಂಜ್ ಎಕ್ಸ್ ಪ್ರೆಸ್’ ಪತ್ರಿಕೆ ಮತ್ತು ಯೂಟ್ಯೂಬ್ ಚಾನಲ್ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೧೦ರಲ್ಲಿ ಕರ್ನಾಟಕ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಪ್ರತಿವರ್ಷ ರಾಜ್ಯ ಮಟ್ಟದ ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಿ ಅವರಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಮತ್ತು ಜಿಲ್ಲಾ ಮಟ್ಟದ ಜಾನಪದ ಮೇಳವು ಸಂಘಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಕವನ, ಲೇಖನಗಳು ಸಿನಿಮಾ ಪತ್ರಿಕೆ ನಟರಾಜ ಮತ್ತು ಸ್ಥಳೀಯ ಪತ್ರಿಕೆ. ಆಕಾಶವಾಣಿಯಲ್ಲಿಯು ಪ್ರಕಟ,ಪ್ರಸಾರವಾಗಿವೆ. ಇವರು ೨೦೦೫ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ೨೦೧೬ರಲ್ಲಿ ಬೀದರದಲ್ಲಿ ನಡೆದ ಜನಪರ ದಲಿತ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಯೋಜಕರಾಗಿ, ೨೦೧೦ರಲ್ಲಿ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಸಂಚಾಲಕರಾಗಿಯು ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೦೮ರಲ್ಲಿ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ `ಅಗ್ನಿ ಅಸ್ತ್ರ' ಪತ್ರಿಕೆಯವರಿಂದ `ವಿಶ್ವ ಚೇತನ ಬುದ್ಧ ಶಾಂತಿ ಸದ್ಭಾವನ ಪ್ರಶಸ್ತಿ,ಯು ಪಡೆದಿದ್ದಾರೆ. ಇವರು ಕಲಬುರಗಿಯಲ್ಲಿ ನಡೆದ ೧೨ನೇ ರಾಜ್ಯ ಮಟ್ಟದ ದಲಿತ ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ಸದ್ಯ ಇವರು ಕನ್ನಡ ಅಭೀವೃದ್ದಿ ಪ್ರಾಧಿಕಾರದ ಬೀದರ ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ