ಶನಿವಾರ, ಜನವರಿ 11, 2025
ಸುನೀತಾ ದಾಡಗೆ
ಕವಯತ್ರಿ ಸುನೀತಾ ದಾಡಗಿಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಶಂಕರರಾವ ಮತ್ತು ಮಲ್ಲಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಬೀದರ ಕೆ.ಎಚ್.ಬಿ.ಕಾಲೋನಿಯ ಶ್ರೀಧರ ಗೌಡರ ಧರ್ಮ ಪತ್ನಿಯಾಗಿದ್ದು, ೧೯೯೮ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ ಕೊಣಮೇಳಕುಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. `ಕನ್ನಡ ವ್ಯಾಕರಣ ಪ್ರವೇಶಿಕೆ ’ (ವ್ಯಾಕರಣ) `ಈ ಸುದಿನ' ಎಂಬ (ಲೇಖನ) `ಜನಪದ ಕಾಳಜಿಯ ಗೌರಮ್ಮ ಸಿದ್ದಾರೆಡ್ಡಿ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ತಾಲೂಕಾ ಬೆಸ್ಟ್ ಗೈಡ್ ಕ್ಯಾಪ್ಟನ್ ಪ್ರಶಸ್ತಿ, ೨೦೦೯ರಲ್ಲಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೦ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗ ಶ್ರೀ ಮುರುಘಮಠದಿಂದ `ಶಿಕ್ಷಕ ರತ್ನ ಪ್ರಶಸ್ತಿ' ಬಸವಮುಕ್ತಿ ಮಂದಿರದಿAದ `ಸೃಜನಶೀಲ ಬರಹಗಾರ್ತಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ಸೃಜನಶೀಲ ರತ್ನ ಪ್ರಶಸ್ತಿ, ಚಿತ್ರದುರ್ಗದ ಸಿರಿಗನ್ನಡ ಪ್ರತಿಷ್ಠಾನದಿಂದ `ಕನ್ನಡ ರತ್ನ ಪ್ರಶಸ್ತಿ' ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ