ಪುಟಗಳು

ಶನಿವಾರ, ಜನವರಿ 11, 2025

ಸುಬ್ಬಣ್ಣ ಅಂಬೆಸಂಗೆ

ಬೀದರ ಜಿಲ್ಲೆಯ ಮೊದಲ ಕಾದಂಬರಿಕಾರರಾದ ಸುಬ್ಬಣ್ಣ ಅಂಬೆಸAಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಎಕಲಾಸಪುರವಾಡಿಯ ಕಂಟೆಪ್ಪಾ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೧೫-೬-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಗ್ರಾಮ ಪಂಚಾಯತ ಕಾರ್ಯದರ್ಶಿಯಾಗಿ, ಪ್ರೌಢ ಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. `ಸಿಂದಿ ಬನದಲ್ಲಿ ಸಿಕ್ಕವಳು' ಎಂಬ ಕಾದಂಬರಿ ೧೯೭೩ ರಲ್ಲಿ ಪ್ರಕಟಿಸಿದ್ದಾರೆ. ಇದು ಬೀದರ ಜಿಲ್ಲೆಯ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೭೮ರಲ್ಲಿ `ಅರಳು' ೧೯೮೭ರಲ್ಲಿ 'ಚೇತನ' ೨೦೧೦ರಲ್ಲಿ 'ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು. ೨೦೧೮ರಲ್ಲಿ `ಚಿಂದಿ' ಎಂಬ ಕಥಾಸಂಕಲನಗಳು,. '೨೦೧೪ರಲ್ಲಿ `ಬಳ್ಳಿಯ ಹೂ ಬಾಡದಿರಲಿ ' ಎಂಬ ಮಿನಿಕಥಾ ಸಂಕಲನವೊAದು ಹೊರತಂದಿದ್ದಾರೆ. ೧೯೯೬ರಲ್ಲಿ `ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ' ೨೦೦೬ರಲ್ಲಿ `ಗುರುತು' ಹಾಗೂ `ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಇತರ ಪ್ರಬಂಧಗಳು' ಎಂಬ ಪ್ರಬಂಧ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು `ವಿಚಾರಗಳಿಂದ ಸವಾಯಿಗಳಿಲ್ಲ' `ಅಡ್ಡಗೊಡೆಯ ಮೇಲಿನ ದೀಪ' ಇವು ಅವರ ಚಿಂತನಾ ಕೃತಿಗಳು. `ಗಡಿನಾಡು ಭಾಷಾ ಸಮಸ್ಯೆ', `ವಿನಯ ಭಂಡಾರಿ' ಎಂಬ ಲೇಖನ ಸಂಕಲನಗಳು ಹಾಗೂ `ನೀನೊಲಿದರೆ ಕೊರಡು ಕೊನರುವುದಯ್ಯಾ ' ಎಂಬ ಸತ್ಯ ಘಟನೆಗಳ ಕುರಿತಾದ ಪುಸ್ತಕವು ಪ್ರಕಟವಾಗಿವೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ೧೯೯೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದವರು ನಡೆಸಿದ ಹೈದರಾಬಾದ ಕರ್ನಾಟಕ ವಿಭಾಗ ಮಟ್ಟದ ಚಿಂತನಾ ಸ್ಪರ್ಧೆಯಲ್ಲಿ ಇವರ `ವಿಚಾರಗಳಿಂದ ಸಹಾಯಿಗಳಿಲ್ಲ ' ಎಂಬ ಚಿಂತನಾ ಕೃತಿಗೆ ಒಂದುಸಾವಿರ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪತ್ರವು ಲಭಿಸಿದೆ. ಮತ್ತು ಗುಲಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ೧೯೯೭ರಲ್ಲಿ ` ಶಮದಾನಿಯ ಶೌರ್ಯ' ಹಾಗೂ ೧೯೯೮ರಲ್ಲಿ `ಕೆಂಪು ಹರಿದು ನೇಸರ ಮೂಡಿದಾಗ ' ಎಂಬ ಕತೆಗಳು ಮೆಚ್ಚುಗೆ ಗಳಿಸಿದರೆ, ೧೯೯೯ರಲ್ಲಿ ಇದೇ ಸ್ಪರ್ಧೆಯಲ್ಲಿ ' ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು.' ಎಂಬ ಕತೆಗೆ ಪ್ರಥಮ ಬಹುಮಾನ ೨೦೦೦. ಮತ್ತು ಚಿನ್ನದ ಪದಕ, ಪ್ರಶಸ್ತಿ ಪತ್ರ ಲಭಿಸಿದೆ. ಇವರಿಗೆ ೨೦೦೩ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ,ಯು ಲಭೀಸಿದೆ. ಮತ್ತು ೨೦೧೧ರಲ್ಲಿ ಭಾಲ್ಕಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಮಾಡಿ ಗೌರವಿಸಲಾಗಿದೆ. ಇವರು ೨೦೦೪ರಿಂದ ೨೦೦೮ ರವರೆಗೆ ಭಾಲ್ಕಿ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದುರಾದೃಷ್ಠ ಇವರು ದಿನಾಂಕ ೮-೧೧-೨೦೨೦ ರಂದು ಇಹಲೋಕ ತ್ಯೇಜಿಸಿದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ