ಶನಿವಾರ, ಜನವರಿ 11, 2025
ಡಾ.ಸೋಮನಾಥ ನುಚ್ಚಾ
ಸಾಹಿತಿ ಡಾ.ಸೋಮನಾಥ ನುಚ್ಚಾ. ಇವರು ಬೀದರ ಜಿಲ್ಲೆ ಭಾಲ್ಕಿಯ ಸಿದ್ರಾಮಪ್ಪಾ ನುಚ್ಚಾ ಮತ್ತು ನಾಗಮ್ಮ ನುಚ್ಚಾ ದಂಪತಿಗಳಿಗೆ ದಿನಾಂಕ ೬-೭-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಶ್ರೀ ಚನ್ನಬಸವೇಶ್ವರ ಪದವಿ ಕಾಲೇಜಿಗೆ ೧೯೭೯ರಲ್ಲಿ ಸೇವೆಗೆ ಸೇರಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ಇವರು `ಗಾಂಧಿ ಚೌಕ್' ಎಂಬ ಕವನ ಸಂಕಲನ, `ಕೋಲಾಟದ ಪದಗಳು' 'ಚೆನ್ನುಡಿ ಹಾರ' ಎಂಬ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಕೋಲಾಟದ ಪದಗಳು ಕೃತಿಯಲ್ಲಿ ರಾಜ್ಯಾದ್ಯಂತ ಪ್ರಚಲಿತವಿರುವ ಕೋಲಾಟದ ಪದಗಳನ್ನು ಸಂಗ್ರಹಿಸಲಾಗಿದೆ. ಈ ಕೃತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗಿದೆ. `ಚೆನ್ನುಡಿ ಹಾರ' ಕೃತಿಯಲ್ಲಿ ಶ್ರೀ ಚನ್ನಬಸವ ಪಟ್ಟದ್ದೆವರು ಕುರಿತಾದ ೧೦೯ ಕವನಗಳಿರುವ ಸಂಪಾದಿತ ಕೃತಿ. ಇವರ ಬರಹಗಳು ಭಾಲ್ಕಿಯ ಖಡ್ಕೆ ಪತ್ರಿಕೆ, ಕಲಬುರಗಿಯ ವಿಶ್ವಕನ್ನಡ, ಲಿಥೋ ಕೈ ಬರಹ ಪತ್ರಿಕೆ ಇತರರು ಸಂಪಾದಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬೆಂಗಳೂರಿನ ಸ್ವಾಮಿ ವಿವೇಕಾನಂದರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ದೆಹಲಿಯ ವಿದ್ಯಾ ಶಿರೋಮಣಿ ಪ್ರಶಸ್ತಿ, ಮತ್ತು ಎಮಿನೆಂಟ್ ಎಜುಕೇಶನ್ ಅವಾರ್ಡ, ರಾಷ್ಟ್ರೀಯ ಗುರು ಗೌರವ ಬಂಗಾರದ ಪದಕ, ಕಲಬುರ್ಗಿಯ `ಕಾಯಕ ರತ್ನ' ಪ್ರಶಸ್ತಿಗಳು ಪಡೆದಿದ್ದಾರೆ. ಇವರಿಗೆ ೨೦೧೯ರಲ್ಲಿ ಭಾಲ್ಕಿಯಲ್ಲಿ ನಡೆದ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ