ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ಜಯದೇವಿ ಗಾಯಕವಾಡ

ಸಾಹಿತಿ ಡಾ.ಜಯದೇವಿ ಗಾಯಕವಾಡ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೭-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಪದವಿ ಪಡೆದು ೨೦೦೧ರಿಂದ ೨೦೦೯ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ ಹುದ್ದೆ ನಿರ್ವಹಿಸಿ, ನಂತರ ಚಿಟಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಹುಮನಾಬಾದ ಕಾಲೇಜಿನ ಕನ್ನಡ ಎಂ.ಎ.ವಿಭಾಗದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ `ಹೇಗೆ ಹೇಳಲಿ ನಾನು', `ಮರುಭೂಮಿ ಮಾಡದಿರಿ', `ಕಪ್ಪು ಹುಡುಗಿಯ ಹಾಡು' (ಕವನಸಂಕಲನಗಳು) `ಯಜ್ಣ ಸೇನಿಯ ಆತ್ಮ ಕಥನ' (ಕಾದಂಬರಿ) `ಮೂವತ್ತೊಂದು ಗಜಲ್', `ಪ್ರಜ್ಞೆ,ಶೀಲ ಕರುಣೆಯ ಗಜಲ್ ಗಳು', `ವೈಶಾಖ ಪೂರ್ಣಿಮೆಯ ಗಜಲ್ ಗಳು’, `ಚಿಂತಕರು ಮತ್ತು ಮಹಿಳೆ', `ಉರಿಲಿಂಗ ಪೆದ್ದಿ ವಚನಗಳು ವಿಶ್ಲೇಷಣೆ', `೫೦೧ ಹಾಯ್ಕುಗಳು', 'ಬೋಧಿ ವೃಕ್ಷದ ಹಾಯ್ಕುಗಳು' ಹೀಗೆ ಸುಮಾರು ೨೭ಕ್ಕೂ ಹೆಚ್ಚು ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಬೆಂಗಳೂರಿನ ಕಸಾಪದ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಅಮ್ಮಾ ಪ್ರಶಸ್ತಿ, ರಮಾಬಾಯಿ, ಅಂಬೇಡ್ಕರ್ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭೀಸಿದ್ದು, ಬಸವಕಲ್ಯಾಣ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹುಮನಾಬಾದ ತಾಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಾಗೂ ಬೇಲೂರಿನ ಉರಿಲಿಂಗ ಪೆದ್ದಿ ಮಠದಲ್ಲಿ ನಡೆದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರ ಬರಹ ಭಾಷಣಗಳು ಅನೇಕ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗೃಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ