ಪುಟಗಳು

ಶುಕ್ರವಾರ, ಜನವರಿ 10, 2025

ಈಶ್ವರ ತಡೋಳಾ

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ ತಡೋಳಾ ರವರು ಸಾಹಿತಿಯಾಗಿ ಉತ್ತಮ ಬರಹಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಚಂದ್ರಪ್ಪಾ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಂದು ಜನಿಸಿದ್ದು, ಡಿ,ಎಂ,ಎಲ್.ಟಿ. ಮತ್ತು ಎಂ,ಎ,ಸ್ನಾತಕೋತ್ತರ ಪದವಿಧರರಾಗಿ ಕೆಲವರ್ಷ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ, ನಂತರ ೨೦೦೩ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಟೆಕ್ನಾಲಜಿಸ್ಟ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸಮತೆಯ ಹಾಡು', `ಕಾವ್ಯ ಚೇತನ’ (ಕವನ ಸಂಕಲನ) `ಸಮರಸ ಜೀವಿ', `ನುಡಿ ಬೆಳಕು' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಬರೆದ ಕವಿತೆಗಳು ನಾಡಿನ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಲ್ಲಿ ಅವು ಪ್ರಕಟವಾಗಿವೆ. ಇವರು ಮೈಸೂರು ದಸರಾ ಕವಿಗೊಷ್ಠಿ ಸೇರಿದಂತೆ ನಾಡಿನ ವಿವಿಧ ಕಡೆ ಕವನವಾಚನ ಮಾಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಮೊದಲ ಕವನ ಸಂಕಲನ `ಸಮತೆಯ ಹಾಡು' ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ