ಶುಕ್ರವಾರ, ಜನವರಿ 10, 2025
ವೀರಣ್ಣ ಮಂಠಾಳಕರ್
ಎರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕ ವೀರಣ್ಣ ಮಂಠಾಳಕರ್ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವೈಜಿನಾಥ ಹಾಗೂ ಶರಣಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿವರೆಗೆ ಓದಿದ ಇವರು ಕೆಲವರ್ಷ ಬೆಂಗಳೂರಿನ ನಂದಿನಿ ಹಾಲಿನ ಡೈರಿಯಲ್ಲಿ ಸೇವೆ ಸಲ್ಲಿಸಿ, ನಂತರ ದಿಕ್ಸೂಚಿ ಪತ್ರಿಕೆಯ ಪ್ರೂಫ್ ರೀಡರ್ ಆಗಿ ಬಸವಕಲ್ಯಾಣದ ಕನ್ನಡ ಪ್ರಭ, ವಿಜಯ ಕರ್ನಾಟಕ ವರದಿಗಾರರಾಗಿ `ಸಂಕಲ್ಪ’ ಮಾಸಿಕದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿ, ಸದ್ಯ ವೀರ ಸಂಕಲ್ಪ ಯು ಟ್ಯೂಬ್ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಭಾವಾಂತರAಗ’ (ಚುಟುಕು ಸಂಕಲನ) `ಗಾಂಧಿ ಆಗ್ಬೇಕಂದುಕೊAಡಾಗ’, `ಕಾಯುವ ದೇವರ ವರ’ (ಕವನ ಸಂಕಲನಗಳು) `ಬದುಕಿನ ಬೆನ್ನೇರಿ’ (ಕಥಾಸಂಕಲನ) `ಸುಳಿಗಳು’ (ಹನಿಗವನ ಸಂಕಲನ) `ಮಾಧ್ಯಮದೊಳಗಣ’ (ಅಂಕಣ ಬರಹ) `ಗಜಲ್ ಗೆಜ್ಜೆನಾದ’ (ಗಜಲ್ ಸಂಕಲನ) `ಮೌನ ಪ್ರತಿಭೆ’ (ವ್ಯಕ್ತಿ ಪರಿಚಯ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ.
ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಮೈಸೂರಿನ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುವ ಇವರಿಗೆ ಮೇ ೮, ೨೦೧೯ರಂದು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಜರುಗಿದ ಬಸವಕಲ್ಯಾಣ ತಾಲೂಕಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೯ರಲ್ಲಿ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನ ರತ್ನ’ ಪ್ರಶಸ್ತಿಯು ನೀಡಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ