ಪುಟಗಳು

ಶುಕ್ರವಾರ, ಜನವರಿ 10, 2025

ದಿ. ಕವಿತಾ ಮಲ್ಲಪ್ಪ

ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿ ಕೆಲ ಕೃತಿಗಳು ರಚಿಸಿದ ಕವಯತ್ರಿಯೆಂದರೆ ದಿ.ಕವಿತಾ ಮಲ್ಲಪ್ಪ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರದವರು. ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.,ಬಿ.ಇಡಿ ಪದವಿಧರರಾದ ಇವರು ಗ್ರಾಂ.ಪA. ಕಾರ್ಯದರ್ಶಿಯಾಗಿ ಸೇವೆಗೆ ಸೇರಿ ಕೆಲ ವರ್ಷ ರಾಯಚೂರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ ಔರಾಧ ತಾಲೂಕಿನ ಚಿಂತಾಕಿ ಮತ್ತು ಬಸವಕಲ್ಯಾಣದ ತಡೋಳ ಗ್ರಾಮ ಪಂಚಾಯಿತನಲ್ಲಿ ಸೇವೆ ಸಲ್ಲಿಸುತ್ತಿರುವಾಗ ೨೦೧೨ರಲ್ಲಿ ಇಹಲೋಕ ತ್ಯಜಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರು `ಸಾಹಿತ್ಯ ಸಂಪ್ರೀತಿ', `ದಲಿತ ಸಾಹಿತ್ಯ ಪಿತಾಮಹ ಬಿ.ಶ್ಯಾಮಸುಂದರ ಜೀವನ ಚರಿತ್ರೆ', `ಪ್ರಜಾಧ್ವನಿ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಸಾಹಿತ್ಯ ಸಂಪ್ರೀತಿ’ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದು ಪ್ರಕಟವಾಗಿದೆ. ಮತ್ತು ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ದೆಹಲಿಯ ದಲಿತ ಸಾಹಿತ್ಯ ಅಕಾದೆಮಿಯ ವತಿಯಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ಬಸವಕಲ್ಯಾಣದ ಲೋಹಿಯಾ ಪ್ರತಿಷ್ಠಾನದ ಶ್ಯಾಮಸುಂದರ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ