ಪುಟಗಳು

ಭಾನುವಾರ, ಜನವರಿ 12, 2025

ಡಾ.ಎಂ.ಜಿ.ದೇಶಪಾಂಡೆ

ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆಯವರು ಮೂಲತಃ ತೆಲಂಗಾಣದ ಮೆದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ಮೋರಗಿ ಗ್ರಾಮದ ಗೋವಿಂದರಾವ ದೇಶಪಾಂಡೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೨೧-೩-೧೯೫೨ರಲ್ಲಿ ಜನಿಸಿದ್ದಾರೆ. ಬಿ.ಎ.ವರೆಗೆ ಕನ್ನಡ ಮಾದ್ಯಮದ ಪದವಿಧರರಾದ ಇವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕರಾಗಿ ಬೀದರ ಭಾಲ್ಕಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹುಟ್ಟಿನಿಂದ ಬೀದರದಲ್ಲಿದ್ದುಕೊಂಡು ಕನ್ನಡ ಕಲಿತು ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ನಾಡು ನುಡಿ ಸೇವೆಗಾಗಿ ತಮ್ಮನ್ನು ತೊಡಿಸಿಕೊಂಡು ೧೯೬೬ರಲ್ಲಿಯೆ ಬರೆಯಲು ಪ್ರಾರಂಭಿಸಿ ೧೯೭೭ರಲ್ಲಿ `ಖ್ಯಾತಿ’ ಎಂಬ ಕೈಬರಹದ `ಲಿಥೋ' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಮತ್ತು ೧೯೭೪ರಲ್ಲಿ ಪ್ರಕಾಶ ಜ್ಯೋತಿ, ಹೂ ಬಾಡಿದಾಗ, ಆಶಾಕಿರಣ, ಸಂತ ಗವಾಯತ್ರಿ ಮೀರಾಬಾಯಿ, (ಕಾದಂಬರಿಗಳು) ಭ್ರಮೆ, ದೇವಯಾನಿ, ಶ್ರಾವಣಿ, ಯಾವುದು ಸತ್ಯ !, ಹೂ ಬಿಡದ ಗೂಲಾಬಿ ಗಿಡ, ಪಾರಿಜಾತ, ಕತೆಯಾದ ಬದುಕು, ಒಡೆದ ಕನ್ನಡಿ, (ಕಥಾ ಸಂಕಲನಗಳು) ಜೀವನ ಇಷ್ಟೇನಾ ? ಮಾಣಿಕ್ಯ ದೀಪ್ತಿ, ಕಾವ್ಯ ಸೌರಭ ಭಕ್ತಿ ಕುಸುಮಾಂಜಲಿ, ಗೀತ ಮಾನಸ, ದೇವನ ಜೋಕಾಲಿ , ದವಳಗಿರಿ, ವಿರಹ ಪ್ರೀತಿ, ವಂಶಿ, ಕಾವ್ಯ ಚಿತ್ರಾಂಬರಿ, ಅನ್ವೇಷಣ, (ಕವನ ಸಂಕಲನಗಳು) ಅಜ್ಜನ ಹಳ್ಳಿ,ಕಾಮನ ಬಿಲ್ಲು, ಚಂದ್ರಹಾರ, (ಮಕ್ಕಳ ಕವನ ಸಂಕಲನಗಳು) ಹನಿ ಹನಿ ಸುಧೆ, ಒಲವಿನ ಚಿತ್ತಾರಗಳು, ಇಂಚರ, ಹನಿ ಹನಿ ಜೇನ ಹನಿ, (ಹನಿಗವನ ಸಂಕಲನ) ಬದುಕು ಸಾಹಿತ್ಯ ಪ್ರಭು, ಸಾಹಿತ್ಯ ರತ್ನಗಳು, ವಿದುರನಗರಿ, ಚಿಂತನ ಮಂದಾರ (ಲೇಖನ ಸಂಕಲನಗಳು) ಮನಃಸಾಕ್ಷಿ (ಅನುವಾದ) ಪ್ರೀತಿ ತಂದ ಫಜಿತಿ (ನಾಟಕ) ಸದ್ಗುರು ಶ್ರೀಪತಾನಂದ ಮಹಾರಾಜ, ವಿಶ್ವಂಭರಾನAದ ಸ್ವಾಮಿಜಿ, ಶ್ರೀ ಜಗನ್ನಾಥ ಮಹಾರಾಜ, ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ, ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ (ಚರಿತ್ರೆಗಳು) ವಚನ ಚಂದ್ರಿಕೆ, (ಆಧುನಿಕ ವಚನ ಸಂಕಲನ) ಬೆಳಕಿನ ಹೆಜ್ಜೆಗಳು (ಶಾಹಿರಿ) ಜೀವ ಸೇಲೆ (ಹಾಯ್ಕುಗಳು) ರತ್ನಾ ಕಾಳೆಗೌಡ ಮತ್ತು ಕಾಶಿನಾಥ ಪಾಟೀಲ್ ನಾಗಲಿಂಗ ಕವಿ, ಹರಿದತ್ತಾ ಭಜನಾಮೃತ್ ಸೇರಿದಂತೆ ಹಲವಾರು ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ಇವರ ಶಂಭುಲಿAಗೇಶ್ವರ ಮಾತೆ ಬಸ್ಸಮ್ಮ ಸದ್ಗುರುಜಿ ದರ್ಶನ ಮತ್ತು ಮಂತ್ರ ಮಹರ್ಷಿ ಶ್ರೀ ಸದ್ಗುರುಜಿ, ಜಗನ್ನಾಥ ಮಹಾರಾಜ ಈ ಕೃತಿಗಳು ಹಿಂದಿ, ಇಂಗ್ಲೀಷ ಮತ್ತು ತೆಲುಗು ಭಾಷೆಗೆ ಅನುವಾದಗೊಂಡಿವೆ. ಮತ್ತು ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಹಾಗೂ ಮಹಾರಾಷ್ಟç ನಾಂದೇಡ ರಮಾನಂದ ತಿರ್ಥ ವಿಶ್ವವಿದ್ಯಾಲಯ ಮತ್ತು ಕಲಬುರಗಿ ಬಿಜಾಪೂರ ವಿಶ್ವವಿದ್ಯಾಲಯಗಳಿಂದ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಮುದ್ರಣಗೊಂಡಿವೆ. ಇವರಿಗೆ ೧೬ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಹಾಸನ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಎರಡನೇ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಕುರಿತು ಬಸವರಾಜ ದಯಾಸಾಗರ ರವರು `ಅಪರೂಪದ ಸಾಹಿತಿ ಎಂ.ಜಿ. ದೇಶಪಾಂಡೆ’ ಎಂಬ ಕೃತಿ ಪ್ರಕಟಿಸಿದ್ದಾರೆ, ಮತ್ತು `ಸಾಹಿತ್ಯ ಮಂದಾರ’ ಎಂಬುದು ಇವರ ಅಭೀನಂದನಾ ಗೃಂಥವಾಗಿದೆ. ಸದ್ಯ ಇವರು ಬೀದರದ ನಿವಾಸಿಯಾಗಿ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕçತಿ ಪ್ರತಿಷ್ಠಾನ ಮೊದಲಾದ ಸಂಸ್ಥೆಯ ಮೂಲಕ ರಾಜ್ಯದ ಹಲವಾರು ಕವಿ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ