ಪುಟಗಳು

ಸೋಮವಾರ, ಜನವರಿ 13, 2025

ರಘುನಾಥ ಹಡಪದ

ಸಾಹಿತಿ ರಘುನಾಥ ಹಡಪದ ರವರು ಮೂಲತಃ ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆ ನಾರಾಯಣ ಖೇಡ ತಾಲೂಕಿನ ಚಾಪ್ಪಿ (ಚಪ್ಪಾ ಖದೀಮ) ಗ್ರಾಮದ ಮಲ್ಲಪ್ಪ ಮತ್ತು ಸುಂದ್ರಮ್ಮಾ ದಂಪತಿಗಳಿಗೆ ದಿನಾಂಕ ೨೫-೭-೧೯೬೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ತೆಲುಗು ಮಾಧ್ಯಮದಲ್ಲಿ ಶಿಕ್ಷಣ ಪಡೆದ ಇವರು ೧೯೮೦ರಲ್ಲಿ ಬೀದರ ನಗರಕ್ಕೆ ವಲಸೆ ಬಂದು ಇಲ್ಲೆ ತಮ್ಮ ಮೂಲ ಉದ್ಯೋಗವೇ ವೃತ್ತಿಯಾಗಿ, ಸಾಹಿತ್ಯ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿ ಪ್ರದೇಶದಲ್ಲಿ ಹೊಂದಿರುವ ಇವರ ಹುಟ್ಟೂರು ಚಪ್ಪಿಯಲ್ಲಿ ಇವರದು ಕನ್ನಡ ಮಾತೃಭಾಷೆ ಕುಟುಂಬವಾಗಿದೆ ಆದರೆ ಇವರು ಶಿಕ್ಷಣ ಕಲಿತದ್ದು ಮಾತ್ರ ತೆಲುಗು. ಬದುಕಿಗೆ ವ್ಯವಹಾರಿಕ ಭಾಷೆ ಕನ್ನಡವಾಗಿದ್ದರಿಂದ ಇವರು ಅನಿವಾರ್ಯವಾಗಿ ಸ್ವಯಂ ಕಲಿಕೆಯಿಂದ ಕನ್ನಡ ಲಿಪಿ ಮತ್ತು ಭಾಷೆ ಕಲಿತು ಕನ್ನಡ ಸಾಹಿತ್ಯದಲ್ಲಿಯೂ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೨೦೧೩ರಲ್ಲಿ `ನಿರಂಜನರ ತತ್ವಪದಗಳು' (ತತ್ವಪದ) ಮತ್ತು `ನಿಟ್ಟೂರಿನ ಮಜಿಗೆಪ್ಪ ಮುತ್ಯಾ (ಚರಿತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಯೋಗ ಸಿದ್ದಾಂತ', `ಬ್ಯಾಲಹಳ್ಳಿಯ ಕರಿಬಸವೇಶ್ವರ ಬದುಕು ಬರಹ', `ನಿಜಾನಂದ ತತ್ವ ಪದಗಳು', `ಅಲ್ದೀಯ ತತ್ವ ಪದಗಳು', `ಬೀದರ ಜಿಲ್ಲೆಯ ಆಯ್ದ ತತ್ವಪದಗಳು', `ಜ್ನಾನನಂದಾ ಭಜನ ಮಾಲೆ', `ಬೀದರ ಜಿಲ್ಲೆಯ ಅಭಂಗ ತತ್ವಪದಗಳು', `ಜಾನಪದ ಇತಿಹಾಸದಲ್ಲಿ ತತ್ವಪದ ಸಾಹಿತ್ಯ ಪರಂಪರೆ', `ಧರಿನಾಡಿನ ತತ್ವಪದ ಸಾಹಿತ್ಯ', `ಮುಗಳಿ ಕಾಶಪ್ಪನವರ ಉಲ್ಲಾಸ ಲಹರಿ'. (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ತತ್ವಪದಗಳು ಆಕಾಶವಾಣಿ ದೂರದರ್ಶನದಲ್ಲಿಯೂ ಪ್ರಸಾರವಾಗಿವೆ. ಇವರಿಗೆ ೨೦೦೯ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ೨೦೧೨ರಲ್ಲಿ ಧರಿನಾಡು ಕನ್ನಡ ಸಂಘದ ವತಿಯಿಂದ ಪ್ರಥಮ ತತ್ವಪದಕಾರರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ