ಸೋಮವಾರ, ಜನವರಿ 13, 2025
ಗುರುನಾಥ ಗಡ್ಡೆ
ಸಾಹಿತಿ, ಪತ್ರಕರ್ತ, ಸಂಪಾದಕರಾಗಿ ಬಹುಕಾಲ ಗುರ್ತಿಸಿಕೊಂಡ ಲೇಖಕರೆಂದರೆ ಗುರುನಾಥ ಗಡ್ಡೆಯವರು. ಇವರು ಮೂಲತಃ ತೆಲಂಗಾಣದವರಾಗಿದ್ದು ಅಣ್ಣೆಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೪-೧೯೬೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬಸವಕಲ್ಯಾಣದ ಎಸ್.ಎಸ್.ಕೆ.ಬಿ. (ಜೆಓಸಿ) ಕಾಲೇಜಿನ ಪ್ರಾಯೋಗಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬಾಲ್ಯದಿಂದಲೂ ಕವನ, ಲೇಖನ, ಬರಹಗಳು ಬರೆದು ಪತ್ರಕರ್ತರಾಗಿ ಹೆಚ್ಚು ಚಿರಪರಿಚಿತರು. ಬಸವಕಲ್ಯಾಣದಲ್ಲಿ `ಬಹಿರಂಗ ಸುದ್ದಿ’ ಎಂಬ ಕನ್ನಡ ದಿನಪತ್ರಿಕೆ ತೆಗೆದು ೩೦ವರ್ಷ ಕ್ಕಿಂತಲೂ ಹೆಚ್ಚು ಕಾಲ ಪತ್ರಕಾ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿ ಹಲವಾರು ಸಾಹಿತ್ಯಿಕ ಕೃತಿಗಳು ಹೊರತಂದಿದ್ದಾರೆ. ೧೯೮೬ರಲ್ಲಿ `ಶರಣರ ನುಡಿ ಮುತ್ತುಗಳು’ ೧೯೯೧ರಲ್ಲಿ `ಕಲ್ಯಾಣ ದರ್ಶನ,’ ೧೯೯೨ರಲ್ಲಿ `ಚೆಂಬೆಳಕು,’ ೨೦೦೩ರಲ್ಲಿ `ಶರಣ ಸಂಸ್ಕೃತಿ ದರ್ಶನ' ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ