ಸೋಮವಾರ, ಜನವರಿ 13, 2025
ಪರಮ.ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿ
ಸಾಹಿತಿಗಳಾದ ಪ. ಪೂಜ್ಯ. ಶ್ರೀ. ಡಾ.ಈಶ್ವರಾನಂದ ಸ್ವಾಮಿಜಿಯವರು ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ ಸಲಗರ ಗ್ರಾಮದ ಶ್ರೀ ಸಿದ್ರಾಮಪ್ಪಾ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಉದರದಲ್ಲಿ ದಿನಾಂಕ ೭-೮-೧೯೭೮ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ಯಿಂದ ಸಂಸ್ಕೃತದಲ್ಲಿ ಅಧ್ಯಯನ ಮಾಡಿದ ಇವರು ಎಂ.ಎ. ಪಿ.ಎಚ್.ಡಿ ಪದವಿಧರರು. `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಪ.ಪೂಜ್ಯ. ಶ್ರೀ. ಸದಾನಂದ ಮಹಾಸ್ವಾಮಿಗಳು ಇವರ ಗುರುಗಳಾಗಿದ್ದು ೧೯೮೭ರಲ್ಲಿ ಬಸವಕಲ್ಯಾಣ ತಾಲೂಕಿನ ಸಸ್ತಾಪೂರಕ್ಕೆ ಆಗಮಿಸಿ, ಇಲ್ಲಿ ಸದ್ಗುರು ಶರಣ ಶಿವಲಿಂಗೇಶ್ವರ ಮಠ ಸ್ಥಾಪಿಸಿದರು. ಶ್ರೀಗಳು ಸಸ್ತಾಪೂರ ಮತ್ತು ಸುರಪುರ ತಾಲೂಕಿನ ಮುದೆನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ಕನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೦ರಲ್ಲಿ `ವಚನ ಸಾಹಿತ್ಯದ ಸಾರ್ವಭೌಮ ದೇವರ ದಾಸಿಮಯ್ಯ', ಮತ್ತು ೨೦೧೪ರಲ್ಲಿ `ದಶೋಪನಿಷತ್ತು ಮತ್ತು ದೇವರ ದಾಸಿಮಯ್ಯನವರ ವಚನಗಳ ಒಂದು ಅಧ್ಯಯನ' (ಸಂಶೋಧನೆ) ೨೦೧೫ರಲ್ಲಿ `ರಮೇಶ ಬಾಬು ಯಾಳಗಿಯವರ ಕೃತಿಗಳ ವಿಮರ್ಶೇ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ