ಶುಕ್ರವಾರ, ಜನವರಿ 10, 2025
ಡಾ.ಸಾರಿಕಾದೇವಿ ಕಾಳಗಿ
ಸಾಹಿತಿ ಡಾ.ಸಾರಿಕಾದೇವಿ ಕಾಳಗಿ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ನಂದಗಾAವ ಗ್ರಾಮದ ಲಕ್ಷ್ಮಣರಾವ್ ಮತ್ತು ನಿರ್ಮಲಾದೇವಿ ದಂಪತಿಗಳಿಗೆ ದಿನಾಂಕ ೧೦-೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್, ಸಿನಿಯರ್ ಪದವಿ ಪಡೆದ ಇವರು ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಪಿ.ಎಚ್.ಡಿ. ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಸವಕಲ್ಯಾಣ ತಾಲೂಕಿನ ನಿರಗುಡಿಯ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ.ರೋಳೆಕರ ನಾರಾಯಣ ರವರ ಧರ್ಮಪತ್ನಿಯಾಗಿದ್ದಾರೆ.
ಇವರು `ಕಾಯಕ', `ದಾಸೋಹ' (ಲೇಖನ) `ಕನಕದಾಸರ ಕೀರ್ತನೆಗಳು', `ಪಂಚಾಕ್ಷರಿ ಮಂತ್ರ', `ಅನುಭಾವ ಪದಗಳ ಸಂಗ್ರಹ', `ಪೂಜ್ಯ ಶರಣಬಸಪ್ಪ ಅಪ್ಪ ವಿರಚಿತ ಮಹಾದಾಸೋಹ ಸೂತ್ರಗಳು ಒಂದು ಚಿಂತನೆ', `ಶರಣ ಸಂಪದ', `ಗಂಗಿ ಗೌರಿ ಹಾಡು' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಕಲಬುರಗಿಯ ಶರಣಬಸವ ಮತ್ತು ಸೋಲಾಪೂರ ವಿಶ್ವವಿದ್ಯಾಲಯದ ಕನ್ನಡ ವಿದ್ಯಾರ್ಥಿಗಳಿಗೆ ಕೆಲವು ಪಠ್ಯ ಪುಸ್ತಕಗಳಾಗಿವೆ. ಮತ್ತು ಅನೇಕ ಬರಹಗಳು ನಾಡಿನ ಪತ್ರಿಕೆ ಹಾಗೂ ದೂರದರ್ಶನ ಆಕಾಶವಾಣಿಗಳಲ್ಲಿ ಪ್ರಕಟ,ಪ್ರಸಾರವಾಗಿವೆ. ಅಷ್ಟೇಯಲ್ಲದೆ ಬೆಂಗಳೂರು ದೂರದರ್ಶನದವರು ನಿರ್ಮಿಸಿದ `ಬುರ್ರಕಥಾ ಈರಮ್ಮ' ಎಂಬ ಸಾಕ್ಷ್ಯಚಿತ್ರದಲ್ಲಿಯು ಭಾಗವಹಿಸಿದ್ದಾರೆ. ಮತ್ತು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದ `ಕವಿಜನಮಾರ್ಗ' ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಎಂ. ಆರ್. ಶ್ರೀಕಾಂತ
ಉದಯೋನ್ಮುಖ ಬರಹಗಾರ ಶ್ರೀಕಾಂತ ಮದರಗಾಂವಕರ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೫-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಕಾಲಜ್ಞಾನ' (ಕವನಸಂಕಲನ) `ಶುಭೋದಯ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕಾವ್ಯನಾಮ ಶ್ರೀರಾಮ ಕವಿ. ವಚನಾಂಕಿತ ಕಾಲಜ್ಞ ಎಂದಾಗಿದೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ ಆಕಾಶವಾಣಿಯಿಂದ ಪ್ರಕಟ, ಪ್ರಸಾರವಗಿವೆ. ಮತ್ತು ೨೦೦೨ರಲ್ಲಿ ಬಸವಕಲ್ಯಾಣ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರಿಗೆ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕವಿರತ್ನ ಶ್ರೀ ಪ್ರಶಸ್ತಿ, ೨೦೧೫ರಲ್ಲಿ `ಕನ್ನಡ ಕಾವ್ಯರತ್ನ ಪ್ರಶಸ್ತಿ' ನೀಡಿದ್ದಾರೆ. ೨೦೧೬ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ `ಕನ್ನಡ ಸೇವಾ ರತ್ನ, ಹಾಗೂ ೨೦೧೭ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ `ಕನಕ ಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ