ಶನಿವಾರ, ಜನವರಿ 11, 2025
ಪಾರ್ವತಿ ವಿ.ಸೋನಾರೆ
ಸಾಹಿತಿ ಪಾರ್ವತಿ ವಿ. ಸೋನಾರೆಯವರು. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಕೊಂಕಣಗಾAವ ಗ್ರಾಮದ ಜಟಿಂಗರಾಯ ಮತ್ತು ಭೀಮಬಾಯಿ ದಂಪತಿಗಳಿಗೆ ದಿನಾಂಕ ೧೮-೭-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬೀದರ ತಾಲೂಕಿನ ಮೈಲೂರು ಗ್ತಾಮದ ಪ್ರಾಥಮಿಕ ಕಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದ ವಿಜಯಕುಮಾರ್ ಸೋನಾರೆಯವರ ಪತ್ನಿಯಾದ ಇವರು `ನಾವಿಬ್ಬರು’ (ಕವನ ಸಂಕಲನ) `ಭವರಿ', 'ಅವ್ವ ನೀ ಸಾಯಬಾರದಿತ್ತು' (ಕಥಾ ಸಂಕಲನಗಳು) `ಅಂಬಿಗರ ಚೌಡಯ್ಯನವರ ಜೀವನ, ವಚನ, ಭಾವಾರ್ಥ.' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಗುಜ್ಜೆವ್ವನ ಗುಡಿಸಲು' ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಮೂರನೇ ಸೆಮಿಸ್ಟರ್ ಗೆ ಪಠ್ಯವಾಗಿದೆ. ಮತ್ತು `ಭವರಿ' ಎಂಬ ಕತೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಇವರು 'ಚಾಂದಿನಿ' ಎಂಬ ಕನ್ನಡ ಹಾಗೂ `ದ ಬ್ಲೇಂಡ್ ಫೇಲ್' ಎಂಬ ಹಿಂದಿ ಕಿರುಚಿತ್ರಗಳಲ್ಲಿ ಹಾಗೂ `ಸುರ್ಯ ಶಿಖಾರಿ' `ನಾಗಮಂಡಲ'. `ಕೊಡೆಗಳು ಸರ್ ಕೊಡೆಗಳು' ಮೊದಲಾದ ನಾಟಕಗಳಲ್ಲಿ ನಟಿಸಿದ್ದಾರೆ. ಇವರ ಕಲೆ ಸಾಹಿತ್ಯವನ್ನು ಕಂಡು ಶಾರದಾ ಪ್ರತಿಷ್ಠಾನದಿಂದ `ಕವಯತ್ರಿ ಕಲಾರತ್ನ ಪ್ರಶಸ್ತಿ .ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ