ಪುಟಗಳು

ಶನಿವಾರ, ಜನವರಿ 11, 2025

ಡಾ. ಚಂದ್ರಪ್ಪ ಭತಮುರ್ಗೆ

ಸಾಹಿತಿ ಡಾ.ಚಂದ್ರಪ್ಪ ಭತಮುರ್ಗೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಗೋಧಿಹಿಪ್ಪರಗಾ ಗ್ರಾಮದ ಧೂಳಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೬-೧೯೬೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೧೯೯೬ರಿಂದ ದಾನಶೀಲ ಚಂದ್ರಪ್ಪ ಗೌರಶೆಟ್ಟಿ ಪದವಿ ಪೂರ್ವ (ಅನುದಾನಿತ) ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ನಿಡವಂಚಿ ಭದ್ರೇಶ್ವರರ ಅನುಭಾವ ಪದಗಳು' ಎಂಬುದು ಇವರ ಎಂ.ಫೀಲ್ ಪ್ರಬಂಧವಾದರೆ, `ಆರೂಢ ತತ್ವ ಪರಂಪರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿ ೨೦೦೪ರಲ್ಲಿ `ಚೆನ್ನಮಲ್ಲೇಶ್ವರ ತ್ಯಾಗಿಗಳು ಇಟಗಿ' (ಚರಿತ್ರೆ) ೨೦೧೧ರಲ್ಲಿ `ನನ್ನೂರು-ನನ್ನವ್ವ ಭಾಗ-೧' ಎಂಬ ಕೃತಿಯು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯಿಂದ `ಅತ್ಯುತ್ತಮ ಪುಸ್ತಕ ಪ್ರಶಸ್ತಿ ಲಭೀಸಿದೆ. ೨೦೧೩ರಲ್ಲಿ `ಬಾನಶೀಲ ಚಂದ್ರಪ್ಪ ಗೌರಶೆಟ್ಟಿ' (ವ್ಯಕ್ತಿಚಿತ್ರ) ೨೦೧೪ರಲ್ಲಿ `ನಮ್ಮೂರು -ನನ್ನವ್ವ. ಭಾಗ -೨, ಹಾಗೂ ೨೦೧೫ರಲ್ಲಿ `ಆದರ್ಶ ಉದ್ಯಮಿ ಸಂಗಯ್ಯ ರೇಜಂತಲ್, ಮತ್ತು `ಅಣ್ಣನ ನೆನಪು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೨೦ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ. `ಕೈವಲ್ಯ ಕೌಸ್ತುಭ' ಎಂಬ ತ್ರೈಮಾಸಿಕದ ಸಂಪಾದಕರಾಗಿ ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ