ಶನಿವಾರ, ಜನವರಿ 11, 2025
ಡಾ.ವಡ್ಡೆ ಹೇಮಲತಾ
ಸಾಹಿತಿ ಡಾ.ವಡ್ಡೆ ಹೇಮಲತಾ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಗಣಪತರಾವ ವಡ್ಡೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೮-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವೀಧರರಾದ ಇವರು ಭಾಲ್ಕಿ ತಾಲೂಕಿನ ವಾಗಲಗಾಂವ ಗ್ರಾಮದ ದೂಳಪ್ಪಾ ಮಾದಗೊಂಡ ರವರ ಧರ್ಮಪತ್ನಿಯಾಗಿದ್ದು, ಸದ್ಯ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾದ ಇವರು ೨೦೦೬ರಲ್ಲಿ `ಬೀದರ ಜಿಲ್ಲೆಯ ಹಬ್ಬ ಹರಿದಿನಗಳು' ೨೦೧೧ರಲ್ಲಿ `ಸಾಹಿತ್ಯ ಚಿಂತನ' ಎಂಬ ಲೇಖನಗಳ ಸಂಕಲನಗಳು, `ಪ್ರತಿಫಲನ' (ಚಿಣ್ಣರ ಕತೆಗಳು) ೨೦೧೪ರಲ್ಲಿ `ಮಂತ್ರ-ತAತ್ರ' (ಸಂ) ಮತ್ತು `ಆಧುನಿಕ ಕನ್ನಡ ಸಾಹಿತ್ಯ ಮಹಿಳಾ ಸಣ್ಣ ಕತೆಗಳ ಅವಲೋಕನ' (ಸಂ) ೨೦೧೬ರಲ್ಲಿ `ದೇಶ ವಿದೇಶದ ಪಯಣದ ಪರಿ' ೨೦೧೮ರಲ್ಲಿ `ನೆರಳ ಬೆಳಕು' ಮತ್ತು `ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-೪ ಭಾಗ-೧ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಮತ್ತು ಇವರ `ಜನಪದ ಸಾಂಸ್ಕೃತಿಕ ಲೋಕ' ಮತ್ತು `ಕುಲದ ಗತಿ ಬಲ್ಲಿರಾ....' ಎಂಬ ಕೃತಿಗಳು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದರಿAದ ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ