ಪುಟಗಳು

ಶನಿವಾರ, ಜನವರಿ 11, 2025

ದಿ. ಪ್ರಭುಶೆಟ್ಟಿ ಸೈನಿಕಾರ

ಸಾಹಿತಿ ಪ್ರಭುಶೆಟ್ಟಿ ಸೈನಿಕಾರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಬೇತಾಳಪ್ಪಾ ಮತ್ತು ನೀಲಾದೇವಿ ದಂಪತಿಗಳಿಗೆ ದಿನಾಂಕ ೧-೭-೧೯೬೬ರಲ್ಲಿ ಜನಿಸಿ, ಬಿ.ಎ.ಪದವಿವರೆಗೆ ಶಿಕ್ಷಣ ಪಡೆದು ಕೆಲಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕವಿ, ಸಾಹಿತಿ, ಸಮಾಜ ಸೇವಕರಾಗಿ ಗುರ್ತಿಸಿಕೊಂಡಿದ್ದರು. ಇವರು ೧೯೮೧ರಲ್ಲಿ `ಶರಣ ಜ್ಯೋತಿ' ೧೯೮೫ರಲ್ಲಿ `ಚಿಂತನ ಜ್ಯೋತಿ, `ಯೇಸು ಸ್ವಾಮಿ’ ೧೯೯೦ರಲ್ಲಿ `ಪ್ರೇಮ ಜ್ಯೋತಿ' (ಕವನ ಸಂಕಲನಗಳು) `ಮಕ್ಕಳ ಜ್ಯೋತಿ' (ಮಕ್ಕಳ ಕೃತಿ) ೧೯೮೩ರಲ್ಲಿ `ನೀರಿಗೆ ಬರುವಳು ನಾರಿ' (ಲಲಿತ ಪ್ರಬಂಧ) ೧೯೮೮ರಲ್ಲಿ `ಡಾ.ಅಂಬೇಡ್ಕರ್' ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರ ವ್ಯಕ್ತಿತ್ವ ಕುರಿತು ೧೯೯೮ರಲ್ಲಿ ಜೈವಂತ ಎಂ.ಜ್ಯೋತಿಯವರು `ಬಡವರ ಬಂಧು ಸೈನಿಕಾರ' ಎಂಬ ಕೃತಿ ಪ್ರಕಟಿಸಿದ್ದರೆ, ಹಂಶಕವಿಯವರು `ಸೈನಿಕರ ಸುತ್ತ-ಮುತ್ತ' ಎಂಬ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಲೇಖಕಿ ಸಾಧನಾ ರಂಜೋಳಕರ್ ರವರು ಕವಿತೆಯೊಂದು ಬರೆದು ಹಾರೈಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ೧೯೯೬ರಲ್ಲಿ ಕರ್ನಾಟಕ ಸರ್ಕಾರÀ ಯುವಜನಾ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ರಾಜ್ಯ ಮಟ್ಟದ ಪ್ರಶಸ್ತಿಯು ನೀಡಿ ಗೌರವಿಸಿದೆ. ಮತ್ತು ಭಾಲ್ಕಿ ತಾಲೂಕಿನ ಆಡಳಿತದಿಂದ ಕನಕಶ್ರೀ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿಯು ಸೇವೆ ಸಲ್ಲಿಸಿದ ಇವರು ೧೭-೮-೨೦೨೦ರಲ್ಲಿ ಇಹಲೋಕ ತ್ಯೇಜಿಸಿದ್ದರಿಂದ ಕನ್ನಡ ಸಾಹಿತ್ಯದ ಕೊಂಡಿಯೊAದು ಕಳಚಿದಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ