ಶನಿವಾರ, ಜನವರಿ 11, 2025
ಇಂದುಮತಿ ಸುತಾರ.
ಅನುವಾದಕರು ಹಾಗೂ ಸಾಹಿತಿ ಇಂದುಮತಿ ಸುತಾರ. ರವರು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆ ಉಮರ್ಗಾ ತಾಲೂಕಿನ ಔರಾದ ಗ್ರಾಮದ ಶಂಕರರಾವ ಮಾಯಾಚಾರಿ ಮತ್ತು ಮಂಗಲಾ ದಂಪತಿಗಳಿಗೆ ದಿನಾಂಕ ೨೪-೧-೧೯೬೬ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಭಾಲ್ಕಿ ತಾಲೂಕಿನ ಮೇಹಕರ ಗ್ರಾಮದ ಮಾಜಿ ಸೈನಿಕ ಗುರುನಾಥ ಸುತಾರ ಅವರ ಧರ್ಮ ಪತ್ನಿಯಾಗಿದ್ದಾರೆ. ಉತ್ತರ ಪ್ರದೇಶದ ಬುಂದೆಲ್ ಖಂಡ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಎಂ.ಎ.ಬಿ,ಎಡ್. ಪದವಿ ಪಡೆದು ಕೆಲಕಾಲ ಉತ್ತರ ಪ್ರದೇಶ ಮತ್ತು ಬೀದರನಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಏರಪರ್ಸ ಶಾಲೆಯ ಪ್ರಾಂಶುಪಾಲರಾಗಿದ್ದಾರೆ.
ಸಾಹಿತ್ಯದಲ್ಲಿ ತುಂಬಾ ಆಸಕ್ತರಾದ ಇವರು ಕನ್ನಡ ಕಲಿತು ಮರಾಠಿ ಹಿಂದಿ ಭಾಷೆಗಳಲ್ಲಿ ೧೯೮೫ರಲ್ಲಿಯೆ ಕತೆ ಕವನ ಬರೆಯಲು ಪ್ರಾರಂಭಿಸಿ, ಮರಾಠಿಯಲ್ಲಿ `ಹಿರವಿ ಪಾಠ' (ಕವನಸಂಕಲನ) ಶಂಭುಲಿAಗ ವಾಲ್ದೊಡ್ಡಿಯವರ `ಮಹಾತಾಯಿ' ಎಂಬ ಕೃತಿ ಹಿಂದಿ ಭಾಷೆಗೆ `ಮಹಾಮಾತಾ' ಎಂದು ಅನುವಾದಿಸಿದ್ದಾರೆ. ಇವರ ಬರಹಗಳು ಹಿಂದಿ ಮಿಲಾಪ್,ಮಹಾಕಾವ್ಯಸ್, ಬೀದರ ಕಿ ಅವಾಜ್, ದೈನಿಕ ಭಾಸ್ಕರ, ಶೀಲಾ ಅನುಬಂಧ, ಮಾಜಿ ಮರಾಠಿ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಹಾರಾಷ್ಟ್ರದಲ್ಲಿ ನಡೆದ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಕರಾಡ, ಚಂದ್ರಾಪೂರ, ಮುಂಬಯಿ, ಉಸ್ಮನಾಬಾದ, ಮೊದಲಾದ ಕಡೆಯಲೆಲ್ಲ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಕಲಬುರಗಿ ಆಕಾಶವಾಣಿಯಿಂದ ಇವರ ಮರಾಠಿ ಭಾಷೆಯ ಕವನಗಳು ಪ್ರಸಾರವಾಗಿವೆ. ಮತ್ತು ಕಲಬುರಗಿಯ `ಮಾಜಿ ಮರಾಠಿ' ತ್ರೈಮಾಸಿಕ ಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ