ಶನಿವಾರ, ಜನವರಿ 11, 2025
ಮಾಯಾದೇವಿ ವಿ.ಗೋಖಲೆ
ಕವಯತ್ರಿ ಮಾಯಾದೇವಿ ವಿ.ಗೋಖಲೆಯವರು ಬೀದರ ಜಿಲ್ಲೆ ಭಾಲ್ಕಿಯ ಮಾಧವರಾವ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨-೧-೧೯೬೬ರಲ್ಲಿ ಜನಿಸಿದ್ದಾರೆ. ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ ಇವರು ೧೯೮೪ರಲ್ಲಿ ಮೊದಲು ಅಂಗವಾನವಾಡಿ ಕಾರ್ಯಕರ್ತೆಯಾಗಿ ಸುಮಾರು ೧೫ ಸೇವೆ ಸಲ್ಲಿಸಿ, ನಂತರ ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಭಾಲ್ಕಿ ತಾಲೂಕಿನ ಶಮಶರಪೂರವಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಭಾವನೆಗಳ ಬಳ್ಳಿ' ಮತ್ತು `ಅಂತರAಗದ ಅಲೆಗಳು' ಎಂಬ ಕವನಸಂಕಲನಗಳು ಪ್ರಕಟಿಸಿದ್ದಾರೆ. ಇವರು ಸಾಹಿತ್ಯಯೊಂದಿಗೆ ಭಗವಾನ್ ಬುದ್ದನ ಬೋಧನೆ, ಆರಾಧನೆ ಭಜನೆಯೊಂದಿಗೆ ಧಮ್ಮ ಪ್ರಚಾರವು ಮಾಡುತ್ತಾ ಬುದ್ಧ, ಬಸವ, ಅಂಬೇಡ್ಕರ್ ರವರ ವಿಚಾರ ಧಾರೆಗಳು ಜನತೆಗೆ ಮುಟ್ಟಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಭಾಲ್ಕಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ಬಿಜಾಪೂರದಿಂದ `ಬಸವಶಾಂತಿ ಪ್ರಶಸ್ತಿ', ಮತ್ತು ದೆಹಲಿಯ `ನ್ಯಾಶನಲ್ ಫೀಲೋಸಫಿ' ಹಾಗೂ `ಸಾವಿತ್ರಿಬಾಯಿ ಪುಲೆ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ