ಶನಿವಾರ, ಜನವರಿ 11, 2025
ಡಾ.ಶಿವಗಂಗಾ ರುಮ್ಮಾ.
ಸಾಹಿತಿ ಡಾ.ಶಿವಗಂಗಾ ರುಮ್ಮಾ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಿದ್ರಾಮಪ್ಪಾ ರುಮ್ಮಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೧-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ. ಪದವಿಧರರಾದ ಇವರು ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿ ಕಲಬುರಗಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಬಸವಣ್ಣ ಮತ್ತು ಕಾರ್ಲ್ ಮಾಕ್ಸ ಒಂದು ತೌಲನಿಕ ಅಧ್ಯಯನ’ ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ಅಕ್ಕನಾಗಮ್ಮ, ಕಲಾದ ಮಾಯೆ, ನಿಲಾಂಬಿಕೆ, ನೀರಾ ನುಡಿ, ಬಂಧೂಕಿನ ಬಾಯಲ್ಲಿ ಗುಬ್ಬಿ ಗೂಡು, ಪರಮಾಣು ಶಕ್ತಿಯ ಸುತ್ತ-ಮುತ್ತ, ಹೊತ್ತು ಹೋಗದ ಮುನ್ನ, ತಳಕೆ ನೀರೆರೆದರೆ, ಬೀದರ ಜಿಲ್ಲಾ ಆಹಾರ ಮತ್ತು ಆರೋಗ್ಯ, ೩೭೧ (ಜೆ) ಹಾಗೂ ಹೈದ್ರಾಬಾದ ಕರ್ನಾಟಕ ಅಭೀವೃದ್ಧಿ, ಆದಿಲ್ ಶಾಹಿ ಕಲಾದ ಬಾಹು ಸಂಸ್ಕçತಿ, ನಡುಗನ್ನಡ ಸಾಹಿತ್ಯ ಸಂಗ್ರಹ (ಸಂ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಕೆಲಕಾಲ ಹೊಸತು, ಮಹಾಮನೆ, ಶಾಂತಿ ಕಿರಣ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ